ಮರೆಮಾಚಲ್ಪಟ್ಟ ಧರ್ಮಸ್ಥಳದ ಬೆದರಿಕೆಯ ನಡುವೆ ಇದೀಗ ಜನರ ಆಗ್ರಹಕ್ಕೆ ಜಯ: ಅಪ್ಸರ್ ಕೊಡ್ಲಿಪೇಟೆ

9 months ago

#ಧರ್ಮಸ್ಥಳಫೈಲ್ಸ್

ನೂರಾರು ಹೆಣ್ಣುಮಕ್ಕಳ ನಿಗೂಢ ಸಾವುಗಳು, ಆತ್ಮಹತ್ಯೆ ಎಂಬ ಹೆಸರಿನಲ್ಲಿ ಮುಚ್ಚಿ ಹಾಕಲಾದ ವಾಸ್ತವಗಳು, ಪ್ರಭಾವಿಗಳ ಕವಚದಲ್ಲಿ ಕಾಲಕಾಲಾಂತರದಿಂದ ಮರೆಮಾಚಲ್ಪಟ್ಟ ಧರ್ಮಸ್ಥಳದ ಬೆದರಿಕೆಯ ನಡುವೆ ಇದೀಗ ಜನರ ಆಗ್ರಹಕ್ಕೆ ಜಯ ಸಿಕ್ಕಿದೆ.

ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಾಮಾಣಿಕ ನಡೆಗೆ Siddaramaiah ಅವರಿಗೂ ಸರ್ಕಾರಕ್ಕೂ ಧನ್ಯವಾದಗಳು.

ಈ ಎಸ್ಐಟಿ ತಂಡ ನಿಜಕ್ಕೂ ನ್ಯಾಯವನ್ನು ಕಂಡುಕೊಳ್ಳಲಿ, ಕಾಮಾಂಧರು ಮತ್ತು ಕೊಲೆಗಾರರು ಯಾವುದೇ ಪ್ರಭಾವವಿಲ್ಲದೆ ಶಿಕ್ಷೆಗೆ ಒಳಗಾಗಲಿ ಎಂಬುದು ನಮ್ಮ ಆಶಯ. ಆದರೆ ಈ ಹೆಜ್ಜೆ ಸಾಕಾಗದು!

ನಿಷ್ಪಕ್ಷಪಾತ ತನಿಖೆ ಖಚಿತವಾಗಬೇಕಾದರೆ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯವರ ನೇರ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕು. ಇಲ್ಲದಿದ್ದರೆ ಪ್ರಭಾವಿಗಳ ಒತ್ತಡದ ಅಡಿಯಲ್ಲಿ ತನಿಖೆ ದಿಕ್ಕು ತಪ್ಪುವ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ.

“ಧರ್ಮಸ್ಥಳ ಫೈಲ್ಸ್”ಗೆ ನ್ಯಾಯ ಸಿಗಬೇಕು. ಸೌಜನ್ಯ ಸೇರಿದಂತೆ ಎಲ್ಲ ಅಸಹಜ ಸಾವುಗಳಿಗೆ ನ್ಯಾಯ ದೊರಕಲೇಬೇಕು.

– ಅಪ್ಸರ್ ಕೊಡ್ಲಿಪೇಟೆ, ಪ್ರಧಾನ ಕಾರ್ಯದರ್ಶಿ ಎಸ್ ಡಿ ಪಿ ಐ

Leave a Reply