#ಧರ್ಮಸ್ಥಳಫೈಲ್ಸ್
ನೂರಾರು ಹೆಣ್ಣುಮಕ್ಕಳ ನಿಗೂಢ ಸಾವುಗಳು, ಆತ್ಮಹತ್ಯೆ ಎಂಬ ಹೆಸರಿನಲ್ಲಿ ಮುಚ್ಚಿ ಹಾಕಲಾದ ವಾಸ್ತವಗಳು, ಪ್ರಭಾವಿಗಳ ಕವಚದಲ್ಲಿ ಕಾಲಕಾಲಾಂತರದಿಂದ ಮರೆಮಾಚಲ್ಪಟ್ಟ ಧರ್ಮಸ್ಥಳದ ಬೆದರಿಕೆಯ ನಡುವೆ ಇದೀಗ ಜನರ ಆಗ್ರಹಕ್ಕೆ ಜಯ ಸಿಕ್ಕಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಾಮಾಣಿಕ ನಡೆಗೆ Siddaramaiah ಅವರಿಗೂ ಸರ್ಕಾರಕ್ಕೂ ಧನ್ಯವಾದಗಳು.
ಈ ಎಸ್ಐಟಿ ತಂಡ ನಿಜಕ್ಕೂ ನ್ಯಾಯವನ್ನು ಕಂಡುಕೊಳ್ಳಲಿ, ಕಾಮಾಂಧರು ಮತ್ತು ಕೊಲೆಗಾರರು ಯಾವುದೇ ಪ್ರಭಾವವಿಲ್ಲದೆ ಶಿಕ್ಷೆಗೆ ಒಳಗಾಗಲಿ ಎಂಬುದು ನಮ್ಮ ಆಶಯ. ಆದರೆ ಈ ಹೆಜ್ಜೆ ಸಾಕಾಗದು!
ನಿಷ್ಪಕ್ಷಪಾತ ತನಿಖೆ ಖಚಿತವಾಗಬೇಕಾದರೆ ಹೈಕೋರ್ಟ್ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯವರ ನೇರ ನೇತೃತ್ವದಲ್ಲಿ ಈ ತನಿಖೆ ನಡೆಯಬೇಕು. ಇಲ್ಲದಿದ್ದರೆ ಪ್ರಭಾವಿಗಳ ಒತ್ತಡದ ಅಡಿಯಲ್ಲಿ ತನಿಖೆ ದಿಕ್ಕು ತಪ್ಪುವ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ.
“ಧರ್ಮಸ್ಥಳ ಫೈಲ್ಸ್”ಗೆ ನ್ಯಾಯ ಸಿಗಬೇಕು. ಸೌಜನ್ಯ ಸೇರಿದಂತೆ ಎಲ್ಲ ಅಸಹಜ ಸಾವುಗಳಿಗೆ ನ್ಯಾಯ ದೊರಕಲೇಬೇಕು.
– ಅಪ್ಸರ್ ಕೊಡ್ಲಿಪೇಟೆ, ಪ್ರಧಾನ ಕಾರ್ಯದರ್ಶಿ ಎಸ್ ಡಿ ಪಿ ಐ




