ಪಾಟ್ನಾ: ನಿತೀಶ್ ಕುಮಾರ್ ಅವರು ಮಹಾಘಟಬಂಧನ್ನಿಂದ ಬೇರ್ಪಟ್ಟು ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಕೆಲವು ದಿನಗಳ ನಂತರ, ಮತ್ತೊಂದು ಸಂಭಾವ್ಯ ಬದಲಾವಣೆಯ ಬಗ್ಗೆ ವದಂತಿಗಳು ಹರಡುತ್ತಿವೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಮಾಹಿತಿ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ಮತ್ತು ಸಿಎಂ ನಿತೀಶ್ ಕುಮಾರ್ ನಡುವೆ ಇತ್ತೀಚೆಗೆ ಪಾಟ್ನಾದಲ್ಲಿ ನಡೆದ ಸಭೆ ನಂತರ, ಆರ್ಜೆಡಿ ನಾಯಕ ಭಾಯಿ ವೀರೇಂದ್ರ ಅವರು ಬಿಹಾರ ಸಿಎಂ ಮಹಾಘಟಬಂಧನ್ ಗೆ ಮರಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮಾಜವಾದಿ ಚಿಂತನೆಯಲ್ಲಿ ದೃಢ ನಂಬಿಕೆ ಹೊಂದಿರುವ ನಿತೀಶ್ ಕುಮಾರ್ ಅವರು ಭಾರತೀಯ ಜನತಾ ಪಕ್ಷದೊಂದಿಗೆ ಇರಲು ಬಯಸದ ಕಾರಣ ಹಿಂದಿರುಗುತ್ತಾರೆ ಎಂದು ಭಾಯಿ ವೀರೇಂದ್ರ ಹೇಳಿದರು.
ಜನತಾ ದಳ-ಯುನೈಟೆಡ್ (ಜೆಡಿಯು) ಹಕ್ಕುಗಳು “ಆಧಾರರಹಿತ” ಮತ್ತು “ಲಾಲು ಪಕ್ಷವು ತನಗೆ ಬೇಕಾದಷ್ಟು ಹಗಲುಗನಸು ಕಾಣಬಹುದು” ಎಂದಿದೆ.
ಬಿಜೆಪಿಯನ್ನು ಅವಹೇಳನ ಮಾಡಿದ್ದಕ್ಕಾಗಿ ಜೆಡಿಯು ಆರ್ಜೆಡಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಇದು ಬಿಹಾರದ ಜನ ನೀಡಿದ ಜನಾದೇಶಕ್ಕೆ ಮಾಡಿದ ಅವಮಾನ ಎಂದಿದೆ.
ಆರ್ಜೆಡಿ ಹಗಲು ಕನಸು ಕಾಣಲಿ ಎಂದು ಜೆಡಿಯುನ ಅಂಜುಮ್ ಆರಾ ಹೇಳಿದ್ದಾರೆ. ನಿತೀಶ್ ಕುಮಾರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇದು ಆರ್ಜೆಡಿಯ ಹತಾಶೆಯನ್ನು ತೋರಿಸುತ್ತದೆ ಎಂದರು.
ಆರ್ಜೆಡಿ ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಲೋಕಜನಶಕ್ತಿ ಪಕ್ಷ ಆರ್ಜೆಡಿ ನಾಯಕನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದೆ.
ಎಲ್ಜೆಪಿಯ ವಿನೀತ್ ಸಿಂಗ್ ಈ ಕುರಿತು ಮಾತನಾಡಿ, ಬಹಳ ಹತಾಶೆಯಿಂದ ಆರ್ಜೆಡಿ ಮಾತನಾಡುತ್ತಿದೆ. ನಿತೀಶ್ ಕುಮಾರ್ ಅವರು ಜಂಗಲ್ ರಾಜ್ ತಂದ ಪಕ್ಷದೊಂದಿಗೆ ಇರುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಅವರು ಉತ್ತಮ ಸ್ಥಾನದಲ್ಲಿದ್ದಾರೆ ಎಂದಿದ್ದಾರೆ.
ಬಿಜೆಪಿ ವಕ್ತಾರ ಡ್ಯಾನಿಶ್ ಇಕ್ಬಾಲ್, NDA ಜೊತೆಗಿನ ನಿತೀಶ್ ಕುಮಾರ್ ಮೈತ್ರಿ ಸಹಜ ಮೈತ್ರಿ. ನಿತೀಶ್ ಕುಮಾರ್ ಅವರ ರಾಜಕೀಯ ಪಕ್ಷ RJD, ಲಾಲು ಪ್ರಸಾದ್ ಯಾದವ್, ಅವರ ಗೂಂಡಾ ಆಡಳಿತ ಮತ್ತು ಅವರ ಅಧಿಕಾರದ ಶೋಷಣೆಯ ವಿರುದ್ಧವಾಗಿದೆ ಎಂದಿದ್ದಾರೆ.
ನಿತೀಶ್ ಕುಮಾರ್ ಎನ್ಡಿಎ ಜೊತೆಗೇಕೆ ಇದ್ದಾರೆ ಎಂಬ ಆತಂಕದಲ್ಲಿರುವ ಜನರ ಅಸಹಾಯಕತೆ ಅರ್ಥವಾಗುತ್ತದೆ. ಅದಕ್ಕಾಗಿಯೇ ಅವರ ಮಾತುಗಳು ನಿರಾಧಾರ, ಎನ್ಡಿಎ ಜತೆಗಿದ್ದು, ಮುಂದೆಯೂ ಪ್ರಮುಖ ಪಾತ್ರ ನಿರ್ವಹಿಸುವುದಾಗಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಹಾರ ಮತ್ತು ದೇಶದ ಅಭಿವೃದ್ಧಿ ಎಂದು ಇಕ್ಬಾಲ್ ಹೇಳಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಮಾಜಿ ಡಿಸಿಎಂ ತೇಜಸ್ವಿ ಯಾದವ್ ಸೆಪ್ಟೆಂಬರ್ 3, 2024 ರಂದು ಪಾಟ್ನಾದ ಮುಖ್ಯ ಕಾರ್ಯದರ್ಶಿಯಲ್ಲಿ ಮಾಹಿತಿ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಸಭೆಯಲ್ಲಿ ಭಾವಹಿಸಿದ್ದರು. ಇದಾದ ನಂತರ ನಿತೀಶ್ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಮರಳಲಿದ್ದಾರೆ ಎಂಬ ವದಂತಿಗಳು ಹರಡಿವೆ.
2020ರಲ್ಲಿ ನಡೆದಿದ್ದ ಬಿಹಾರದ 17ನೇ ವಿಧಾನಸಭೆ ಚುನಾವಣೆಯಲ್ಲಿ RJD 75, BJP 74, JDU 43, Congress 19, LJP 1 ಮತ್ತು 31 ಇತರ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದರು. 2025ರ ನವೆಂಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ.



