ನಟಿ ನಯನ ತಾರಾ ತಮ್ಮ ಪ್ರಿಯಕರ ವಿಘ್ನೇಶ್ ಶಿವನ್ ಮದುವೆಯಾಗಲು ಕುಜದೋಷ ಅಡ್ಡಿಯಾಗಿದೆ. ಇದಕ್ಕೆ ಪರಿಹಾರಾರ್ಥವಾಗಿ ಜೋತಿಷಿಗಳು ಭಾವಿ ಪತಿಯನ್ನ ಮದುವೆಯಾಗುವ ಮುನ್ನ ಮರದೊಂದಿಗೆ ಮದುವೆಯಾಗುವುದೊಂದೇ ಪರಿಹಾರ ಎಂದಿದ್ದಾರೆ. ಆಧುನಿಕ ಕಾಲದಲ್ಲೂ ಇಂತಹ ಹೇಳಿಕೆಗಳನ್ನು ಹೇಳುವವರು, ಅದನ್ನು ಪಾಲಿಸುವವರು ಇದ್ದಾರೆ. ಸೆಲೆಬ್ರಿಟಿಗಳೇ ಹೀಗೆ ಅವೈಜ್ಞಾನಿಕವಾಗಿ ನಡೆದುಕೊಂಡರೆ ಅವರ ಹಿಂಬಾಲಕರು ಇನ್ನೇನು ಮಾಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.
