ಜೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ, ನಟ ರಮೇಶ್ ಅರವಿಂದ್ , ”ನಿನ್ನ ತಂಗಿ ಯಾರಾದ್ರೂ ಮೆಕ್ಯಾನಿಕ್ ಒಬ್ಬನನ್ನು ಪ್ರೀತಿಸಿದರೆ ನಿನ್ನ ತಂಗಿಗೆ ಹೇಗೆ ಬುದ್ಧಿ ಹೇಳ್ತೀಯ? ನಿನಗೆ ತೋಚಿದ್ದನ್ನು ತೋಚಿದಂತೆ ಮಾತಾಡು” ಎಂದು ಒಬ್ಬ ಬಾಲಕಿಗೆ ಕೇಳುತ್ತಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಆಗ ಆ ಹುಡುಗಿಯು, ‘ಕೊಚ್ಚೆ ಗುಂಡಿಗೆ ಬೀಳಬೇಡ. ದುಡ್ಡು ಮುಖ್ಯ. ನೀನು ಮೆಕ್ಯಾನಿಕ್ ನ ಪ್ರೀತಿಸಿದರೆ ಗ್ರೀಸು ತಿಂದ್ಕೊಂಡು ಬದುಕಬೇಕಾಗುತ್ತೆ” ಎಂದು ದೊಡ್ಡ ಉಮೇದಿನಿಂದ ಹೇಳುತ್ತಾಳೆ. ಆ ಹುಡುಗಿಯ ಮಾತು ಕೇಳಿ, ರಮೇಶ್ ಅರವಿಂದ್ ಮತ್ತು ಆತನ ಜೊತೆಯಲ್ಲಿದ್ದ
ಹೊಟ್ಟೆ ತುಂಬಿದ ಅಹಂಕಾರಿಗಳು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಆ ಹುಡುಗಿಯನ್ನು ಮತ್ತಷ್ಟು ಹುರಿದುಂಬಿಸಿ ಪ್ರಚೋದಿಸುತ್ತಾರೆ.
ಆಗ ಆ ಹುಡುಗಿ, “ಮೆಕ್ಯಾನಿಕ್ ಗಳನ್ನು ಪ್ರೀತಿಸುವುದು ಕೊಚ್ಚೆ ಗುಂಡಿಗೆ ಬಿದ್ದಂತೆ, ಗ್ರೀಸ್ ತಿಂದು ಬದುಕಬೇಕಾಗುತ್ತೆ” ಎಂದು ಹೇಳುತ್ತಾಳೆ. ಮೌಲ್ಯಪ್ರಜ್ಞೆ ಕಳೆದುಕೊಂಡ ಆ ಹುಡುಗಿಗೆ ಈ ಮಹನೀಯರು ಬುದ್ಧಿ ಹೇಳುವುದು ಬಿಟ್ಟು ಚಪ್ಪಾಳೆ ತಟ್ಟಿ ಕೇಕೆಹಾಕಿ ಶಿಳ್ಳೆ ಹೊಡೆದು ನಗುತ್ತಾರೆ.
ಮೆಕ್ಯಾನಿಕ್ ಗಳ ಅಥವಾ ಇನ್ನಾವುದೇ ಜನರ ಬಡತನದ ಬದುಕನ್ನು ಲೇವಡಿ ಮಾಡಿಕೊಂಡು ನಗುವ ಇವರು ಎಂತಹ ಕ್ರೂರಿಗಳಿರಬಹುದು ? ಸಿರಿವಂತಿಕೆಯ ಅಹಂಕಾರ ನೆತ್ತಿಗೇರಿ ಮಾನವೀಯತೆಯ ಚಿಗುರನ್ನೇ ಒಸಕಿ ಹಾಕುವಷ್ಟು ಮನುಷ್ಯರು ಕ್ರೂರಿಗಳಾಗಬಾರದು.
– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




