ನಾವು ಕಥೆಯನ್ನೋ ಅಥವಾ ಕಾದಂಬರಿಯನ್ನೋ ಯಾಕೆ ಓದಬೇಕು? ಎಂದು ಕೇಳಿಕೊಂಡರೆ ತಕ್ಷಣ ಬರುವ ಉತ್ತರ – ʻಅದು ನಮ್ಮ ಜೀವನದ ಅನುಭವವನ್ನು ಬೇರೆ ರೀತಿಯಾಗಿ ನೋಡುವುದಕ್ಕೆ ಅನುವು ಮಾಡಿಕೊಡುತ್ತದೆʼ ಎಂಬುದು ಅಲ್ಲವೇ?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಆದರೆ ಮೌನೇಶ್ ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಪ್ರಸ್ತುತ ಕಾಲದ ಬದಲಾದ ಓದುಗರ ಓದಿನ ಲಯ (tempo) ಹಾಗೂ ರೂಪಕ ಸೂಕ್ಷ್ಮತೆಯನ್ನು (visual sensibility) ಬಹಳ ಸಶಕ್ತವಾಗಿ ಹಿಡಿದಿರುವ ಮೌನೇಶ್ ಈ ಕಾದಂಬರಿಯನ್ನು ನಾವು ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತಾರೆ!
ನಾವು ಊಹಿಸಲಿಕ್ಕೆ ಸಾಧ್ಯವೇ ಆಗದ ಸ್ಥಿತಿ-ಗತಿಗಳಲ್ಲಿ ಈ ಕಾದಂಬರಿಯ ಮುಖ್ಯ ಪಾತ್ರಗಳು ಏನೆಲ್ಲಾ ರೂಪವನ್ನು ತಾಳುತ್ತವೆ, ಕಾಲ ಹಾಗೂ ಅವಕಾಶದ ಹೊಡೆತಕ್ಕೆ ಸಿಲುಕಿ ಏನೇನೆಲ್ಲಾ ಅನುಭವಿಸುತ್ತವೆ ಎಂಬುದನ್ನು ನಾವು ಓದುತ್ತ ಹೋಗುವಾಗ ನಮಗೆ ಒಂದು ಬಗೆಯ ವಿಸ್ಮಯದ ಭಾವ ಆವರಿಸಿಕೊಂಡುಬಿಡುತ್ತದೆ.

ಈ ಕಾದಂಬರಿ ಏಕಕಾಲಕ್ಕೆ ನಮ್ಮ ಈ ನಿಜಜೀವನದ logic ಅನ್ನು ಮತ್ತು ಅದು ಸೃಷ್ಟಿಸಿರುವ Fictional Narrative ಲೋಕದ logic ಅನ್ನು ಒಟ್ಟೊಟ್ಟಿಗೆ ನೋಡುವ ಒಂದು ಹೊಸ ಅವಕಾಶವನ್ನು ಮಾಡಿಕೊಡುತ್ತದೆ ಮತ್ತು ಆ ಮೂಲಕ ಒಂದು ಹೊಸದಾದ ಹಾಗೂ ಬಹಳ ಘನವಾದ Magic ಲೋಕವನ್ನೇ ಅದು ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸಿಬಿಡುತ್ತದೆ!
-ಡಾ. ಉಪೇಂದ್ರ ಕೆ ಆರ್




