ಪ್ರೀತಿ ಮತ್ತು ದ್ವೇಷ
ಪ್ರೀತಿ ಮತ್ತು ದ್ವೇಷವನ್ನ ಎರಡನ್ನು ಏಕಕಾಲಕ್ಕೆ ಪ್ರಕಟಿಸುವ ಕಾರಣದಿ ಸಮಾಜದಲ್ಲಿ ಸಮಸ್ಯೆಗಳು ತಲೆದೋರಿದೆ
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ತನ್ನ ಒಪ್ಪಿತ ಸಿದ್ದಾಂತವನ್ನು ಪ್ರೀತಿಸುವವರು ಅನ್ಯರ ಒಪ್ಪಿತ ಸಿದ್ದಾಂತವನ್ನು ಒಪ್ಪಬೇಕು ಇಲ್ಲದಿದ್ದರೆ ಭಿನ್ನ ಅಭಿಪ್ರಾಯವನ್ನಷ್ಟೇ ಪ್ರಕಟಿಸಬಹುದು ಆದರೆ ದ್ವೇಷಿಸುವುದು ಸರಿಯಲ್ಲ
ತಮ್ಮ ಸಂಸ್ಕೃತಿಯನ್ನು ಪ್ರೀತಿಸುವವರು ಅನ್ಯ ಸಂಸ್ಕೃತಿಯನ್ನು ಪ್ರೀತಿಸದಿದ್ದರೂ ಚಿಂತೆ ಇಲ್ಲ ದ್ವೇಷಿಸುವ ಅವಶ್ಯಕತೆ ಇರುವುದಿಲ್ಲ
ತನ್ನವರ ಬದುಕು ಶಾಂತಿಯುತವಾಗಿ ಇರಬೇಕೆಂದು ಬಯಸುವವರು ಅನ್ಯರ ಬದುಕನ್ನು ಶಾಂತತೆಯಿಂದಲೇ ಕಾಣಬೇಕೆ ಹೊರತು ಅಶಾಂತಿಯ ಮೂಲಕ ಬಗ್ನಗೊಳಿಸುವ ದಾರಿಯಲ್ಲಿ ಸಾಗಬಾರದು
ತನ್ನವರನ್ನು ಪ್ರೀತಿಸುವವರು ಅನ್ಯರನ್ನು ಪ್ರೀತಿಸಬೇಕೆಂದೇನಿಲ್ಲ ಆದರೆ ದ್ವೇಷಿಸುವಂತಹ ಅವಶ್ಯಕತೆ ಇರುವುದಿಲ್ಲ
ಒಬ್ಬರು ಇಷ್ಟಪಡುವ ಆಚಾರ ವಿಚಾರ ನಂಬಿಕೆ ಇವುಗಳನ್ನು ಎಲ್ಲರೂ ಒಪ್ಪ ಬೇಕೆಂಬ ಒತ್ತಡವನ್ನ ಹೇರುವುದು ಪರೋಕ್ಷವಾಗಿ ಹಿಂಸೆಯ ಪ್ರಚೋದನೆಗೆ ಕಾರಣವಾಗುತ್ತದೆ
ಪ್ರೀತಿಗೆ ಪ್ರೀತಿಯೇ ಸಾಟಿ ,ಪ್ರೀತಿಗೆ ದ್ವೇಷ ಮಧ್ಯಲ್ಲ, ಶಾಂತಿಗೆ ಶಾಂತಿಯೇ ಮದ್ದು, ಅಶಾಂತಿ ಎಂದಿಗೂ ಮದ್ದಾಗುವುದಿಲ್ಲ, ನಾವು ಒಪ್ಪುವ ಸಿದ್ದಾಂತವನ್ನು ಎಲ್ಲರೂ ಒಪ್ಪಲೇಬೇಕೆಂದು ಅಭಿಪ್ರಾಯ ಪಡುವುದು ಒತ್ತಡದ ತಂತ್ರವಾಗುತ್ತದೆ, ಅವರವರ ಅಭಿಪ್ರಾಯವನ್ನು ಗೌರವಿಸುವುದರ ಮೂಲಕ ಬದುಕುವುದು ಸ್ವಾಸ್ಯ ಸಮಾಜದ ಬುನಾದಿಯಾಗುತ್ತದೆ.
ಪ್ರೀತಿ ಮತ್ತು ದ್ವೇಷ, ಶಾಂತಿ ಮತ್ತು ಅಹಿಂಸೆ, ಏಕಕಾಲದಲ್ಲಿ ಬಳಸಬಹುದಾದ ಅಸ್ತ್ರಗಳಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




