ಚಾಮರಾಜನಗರ: ಕಾವ್ಯ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವುದು, ಕಾವ್ಯದ ಓದುಗರನ್ನು ಕೇಳುಗರನ್ನು ಸಮರ್ಥವಾಗಿ ಹಾಗು ಸುಲಭವಾಗಿ ತಲುಪುವುದು ಮತ್ತು ಸಹೃದಯ ಓದುಗರನ್ನು ಕಾವ್ಯದೆಡೆಗೆ ಸೆಳೆಯುವ ಉದ್ದೇಶದಿಂದ ಬೆಂಗಳೂರಿನ ರಂಗಮಂಡಲ ಹಾಗೂ ಚಾಮರಾಜನಗರ ರಂಗ ವಾಹಿನಿ (ರಿ) ಸಂಸ್ಥೆಯ ಸಹಕಾರದೊಂದಿಗೆ ಜುಲೈ 3ನೇ ಭಾನುವಾರ ಒಂದು ದಿನದ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜಿಲ್ಲೆಯ ಕವಿ ಹಾಗೂ ಕವಿಯತ್ರಿಯರು ಸೇರಿದಂತೆ ವಿಶೇಷವಾಗಿ ಜಿಲ್ಲೆಯ ಸ್ನಾತಕೋತ್ತರ, ಪದವಿ, ಪದವಿ ಪೂರ್ವ ವಿದ್ಯಾರ್ಥಿ ಕವಿಗಳಿಗೆ ಯಾನದಲ್ಲಿ ಅವಕಾಶ ಕಲ್ಪಿಸಲಾಗುವುದು.
ಕಾವ್ಯ ಸಂಸ್ಕೃತಿ ಯಾನದಲ್ಲಿ ಭಾಗವಹಿಸುವ ಕವಿಗಳಿಗೆ ಉಚಿತ ಊಟ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಪ್ರಯಾಣ ಭತ್ಯೆ ನೀಡುವುದಿಲ್ಲ. ಈ ಯಾನದಲ್ಲಿ ಹತ್ತಕ್ಕೂ ಹೆಚ್ಚು ನಾಡಿನ ಪ್ರಸಿದ್ಧ ಹಿರಿಯ ಕವಿಗಳು ಭಾಗವಹಿಸಲಿದ್ದಾರೆ.
ಈ ಕಾವ್ಯ ಸಂಸ್ಕೃತಿ ಯಾನದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಹೆಸರುಗಳನ್ನು ಪ್ರಧಾನ ಸಂಚಾಲಕ ಡಿ.ಬಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ 9448970731,ಜಿಲ್ಲಾ ಸಂಚಾಲಕರಾದ ಸ್ವಾಮಿ ಪೊನ್ನಾಚಿ 998087186, ಸಿಎಂ ನರಸಿಂಹಮೂರ್ತಿ 9916115263 ಇವರನ್ನು ಸಂಪರ್ಕಿಸಲು ಕೋರಲಾಗಿದೆ.




