ಸಾವಿನಲ್ಲೂ ಸಾರ್ಥಕತೆ ಮೆರೆದ ಗಂಗಮ್ಮ

11 months ago

ಬಸವ ಜ್ಯೋತಿ ಐ ಬ್ಯಾಂಕ್‍ಗೆ ನೇತ್ರದಾನ

ಚಿತ್ರದುರ್ಗ: ಹಿರಿಯೂರು ತಹಶೀಲ್ದಾರರ ಕಚೇರಿ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ ರೆಡ್ಡಿ ಅವರ ತಾಯಿ ಟಿ.ಗಂಗಮ್ಮ (75) ಅಕಾಲಿಕ ಮರಣ ಹೊಂದಿದ್ದು, ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.

ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿ ಶ್ರೀ ಬಸವ ಜ್ಯೋತಿ ಐ ಬ್ಯಾಂಕ್‍ಗೆ ಸಂಪರ್ಕ ಸಾಧಿಸಿ ಡಾ. ವೆನಿಲ್ಲಾ ಅವರ ಸಹಯೋಗದೊಂದಿಗೆ ಗಂಗಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕು ನೀಡುವಂತಹ ಮಹತ್ತರ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯೂರು ಶಾಖೆಯ ಅಧ್ಯಕ್ಷ ಆರ್.ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿ, ದಿವಂಗತರ ಕುಟುಂಬದವರಿಗೆ ಸಾಂತ್ವನ ನೀಡುವ ಮೂಲಕ ಧೈರ್ಯ ಹೇಳಿದರು.

ಈ ಸಂದರ್ಭದಲ್ಲಿ ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಕುಟುಂಬಸ್ಥರಿಗೆ ಪ್ರಶಂಸಾ ಪತ್ರ ವಿತರಿಸಿದರು. ಹಿರಿಯೂರು ಶಾಖೆಯ ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಐ ಬ್ಯಾಂಕ್ ನಿರ್ದೇಶಕ ವೀರೇಶ್, ವೆಂಕಟಸ್ವಾಮಿ ಹಾಗೂ ಗಂಗಮ್ಮ ಅವರ ಪುತ್ರ ಶ್ರೀನಿವಾಸ ರೆಡ್ಡಿ ಹಾಜರಿದ್ದರು.

Leave a Reply