ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಸಂದರ್ಭಗಳಲ್ಲಿ ಪ್ರಕೃತಿ ದತ್ತವಾದ ಅವಘಡಗಳು ಮತ್ತು ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಪರಿಹಾರ ನೀಡುವುದು ಉತ್ತಮವಾದಂತಹ ಕಾರ್ಯವಾಗಿರುತ್ತದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಇಂತಹ ಸಂದರ್ಭದಲ್ಲಿ ಪರಿಹಾರ ನೀಡುವ ವಿಚಾರದಲ್ಲಿ ವೈಜ್ಞಾನಿಕವಾದಂತಹ ರೀತಿಯಲ್ಲಿ ಚಿಂತಿಸಿ ಮೊತ್ತದ ಪ್ರಮಾಣ ನಿರ್ಧರಿಸಬೇಕು. ಮೃತರಾದಂತಹ ವ್ಯಕ್ತಿಗಳು ಅವರ ವಯಸ್ಸು ಮತ್ತು ಅವರ ಕುಟುಂಬದ ಅವಲಂಬನೆಯನ್ನು ಸಹ ಪರಿಗಣಿಸಬೇಕು.
60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ನೀಡುವಂತಹ ಮೊತ್ತ ಮತ್ತು 18ರಿಂದ 40 ವರ್ಷದ ಒಳಗಿನ ಜನರು ಸತ್ತಾಗ ನೀಡುವ ಪರಿಹಾರದ ಮೊತ್ತ ಒಂದೇ ಆಗಿರುತ್ತದೆ. 60 ವರ್ಷದ ವಯಸ್ಸು ದಾಟಿದ ಹಿರಿಯ ನಾಗರಿಕ ರಿಗೆ ಕುಟುಂಬದ ನಿರ್ವಹಣೆಯ ಹೊಣೆಗಾರಿಕೆ ಹೆಚ್ಚು ಇರುವುದಿಲ್ಲ. ಇಂತಹ ಕುಟುಂಬವು ಸಹ ಇವರ ಆದಾಯವನ್ನೇ ಅವಲಂಬಿಸಿರುವುದಿಲ್ಲ. ಆದರೆ ಸಣ್ಣ ವಯಸ್ಸಿನ ದುಡಿಯುವ ಜನರು ನಿಧನರಾದರೆ ಆ ಕುಟುಂಬದ ನಿರ್ವಹಣೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವ ಸಂದರ್ಭದಲ್ಲಿ ಮೃತರ ವಯಸ್ಸನ್ನು ಸಹ ಮಾನದಂಡವನ್ನಾಗಿ ಪರಿಗಣಿಸುವಂತಹ ಆಲೋಚನೆಯನ್ನು ಸರ್ಕಾರ ಮಾಡಲಿ.
ಹಲವಾರು ದಶಕಗಳ ಕಾಲ ಬದುಕಿ ದುಡಿದು ಸಂಸಾರಗಳನ್ನ ಸಾಗಿಸಬೇಕಾಗಿದ್ದ ಅಥವಾ ಕುಟುಂಬಕ್ಕೆ ಆಧಾರ ಸ್ತಂಭಗಳಾಗಿದ್ದ ಯುವಜನರು ಮತ್ತು ಮಧ್ಯಮ ವಯಸ್ಸಿನವರು ನಿಧನರಾದರೆ ಅವರಿಗೆ ಈಗ ಕೊಡುತ್ತಿರುವ ಪರಿಹಾರದ ಭಕ್ತ ಸರಿಹೊಂದುವುದಿಲ್ಲ.
ಸಾವಿನ ಸಂದರ್ಭದಲ್ಲಿ ಯಾರು ಸಹ ಯಾವುದೇ ರೀತಿಯ ರಾಜಕಾರಣದ ಮಾತುಗಳನ್ನ ಆಡಬಾರದು. ಕೊಡುವ ಮನಸ್ಸಿದ್ದರೆ ಕೊಟ್ಟು ದೊಡ್ಡವರಾಗಿ. ಕೇವಲ ಬಾಯಿ ಚಪಲಕ್ಕೆ ಮಾತುಗಳನ್ನಾಡಿ ಪ್ರಚಾರ ಪಡೆಯಲು ಬಯಸಬೇಡಿ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗಷ್ಟೇ ಅದರ ದುಃಖ ಗೊತ್ತಿರುತ್ತದೆ. ಕೇವಲ ಪ್ರಚಾರಕ್ಕಾಗಿ ಮಾತನಾಡುವವರಿಗೆ ಅದರ ಅನುಭವ ಆಗುವುದಿಲ್ಲ.
ಯಾವುದೇ ಅಪಘಾತವು ಸಹ ಪೂರ್ವ ನಿಯೋಜಿತವಾಗಿರುವುದಿಲ್ಲ. ಆಕಸ್ಮಿಕವಾಗಿ ಕೆಲವು ತಪ್ಪುಗಳಿಂದ ಸಂಭವಿಸುತ್ತದೆ. ಇದಕ್ಕೆ ಪೊಲೀಸರನ್ನು ಹೊಣೆ ಮಾಡುವುದರಲ್ಲಿ ಅರ್ಥವಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




