ಸಿಆರ್ಸಿ ಕೇಂದ್ರದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ
ದಾವಣಗೆರೆ: ಆರೈಕೆದಾರರು ಮತ್ತು ವಿದ್ಯಾರ್ಥಿಗಳು ದಿವ್ಯಾಂಗರ ಅಭಿವೃದ್ದಿ ಮತ್ತು ಭವಿಷ್ಯಕ್ಕಾಗಿ ಅವರ ನಾಯಕತ್ವ ಹೆಚ್ಚಿಸಬೇಕೆಂದು ಸಿಆರ್ಸಿವ ನಿರ್ದೇಶಕರಾದ ಮೀನಾಕ್ಷಿ ತಿಳಿಸಿದರು.
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
ಸಿಆರ್ಸಿರ ಕಚೇರಿಯಲ್ಲಿ ವಿಕಲಚೇತನರು, ಪೋಷಕರಿಗಾಗಿ ವಿವಿಧ ಕಾರ್ಯಕ್ರಮಗಳು ಸ್ಪರ್ಧೆಗಳನ್ನು ನಡೆಸುವ ಮೂಲಕ ಅಂತರರಾಷ್ಟ್ರೀಯ ದಿವ್ಯಾಂಗರ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
30-ದಿವ್ಯಾಂಗ ವ್ಯಕ್ತಿಗಳಿಗೆ 57-ಸಹಾಯಕ ಸಾಧನಗಳನ್ನು ಸಿಆರ್ಸಿಗ ಪಿಎಂಡಿಕೆ, ಎಡಿಐಪಿ, ಆರ್ವಿೆವೈ ಯೋಜನೆಗಳ ಮೂಲಕ ವಿತರಿಸಲಾಯಿತು. ದಿವ್ಯಾಂಗ ಮಕ್ಕಳ ಪೋಷಕರು ಮತ್ತು ದಿವ್ಯಾಂಗ ವಿದ್ಯಾರ್ಥಿಯು ದಾವಣಗೆರೆಯ ಸಿಆರ್ಸಿ್ ಯ ಆರಂಭಿಕ ಮಧ್ಯಸ್ಥಿಕೆ ಸೇವೆಗಳು, ಕೌಶಲ್ಯ ಅಭಿವೃದ್ಧಿ ವೃತ್ತಿಪರ ತರಬೇತಿ ಸೇವೆಗಳು ಮತ್ತು ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೋರ್ಸ್ಗೆಿ ಸಂಬಂಧಿಸಿದಂತೆ ಪಿಡಬ್ಲ್ಯೂಡಿ ಗಳ ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ದಾವಣಗೆರ ಸಿಆರ್ಸಿಿ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘನೆ ವ್ಯಕ್ತಪಡಿಸಿದರು.
17-ವಿಕಲಚೇತನರು ಆರೈಕೆದಾರರು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 21-ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 16-ವಿದ್ಯಾರ್ಥಿಗಳು, ಹಾರೈಕೆದಾರರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದರು. 1-ಗಾಯನ, 4-ನೃತ್ಯಗಳು, 7-ಅಲಂಕಾರಿಕ ಉಡುಪುಗಳು ಸೇರಿದಂತೆ ಸಾಂಸ್ಕøತಿಕ ಸ್ಪರ್ಧೆಗಳನ್ನು ಇ.ತಾಮರೈಸೆಲ್ವನ್, ರಾಜು ಟಿ, ಮಾರುತಿ ಕೃಷ್ಣ ಗೌಡ ಮತ್ತು ಸುರೇಂದ್ರಬಾಬು ರವರುಗಳು ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ 110 ವಿಕಲಚೇತನರು ಹಾರೈಕೆದಾರರು ಭಾಗವಹಿಸಿದ್ದರು.
ಸಿಜಿ ಆಸ್ಪತ್ರೆಯ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ನ್ ನರರೋಗ ತಜ್ಞ ಡಾ.ವೀರಣ್ಣ ಗಡದ್, ಕಬಿ-ಸಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂಧ್ಯಾ ಅವರು ಅಂಗವೈಕಲ್ಯಕ್ಕೆ ಕಾರಣವಾಗುವ ಸಾಮಾನ್ಯ ನರವೈಜ್ಞಾನಿಕ ಕಾಯಿಲೆಗಳ ಕುರಿತು ಮಾತನಾಡಿದರು. ಸಾಮಾನ್ಯ ಅಸ್ವಸ್ಥತೆಗಳನ್ನು ತಡೆಗಟ್ಟುವ ವಿಧಾನಗಳು ಎಪಿಲೆಪ್ಪಿ, ಸ್ಟ್ರೋಕ್, ಬುದ್ಧಿಮಾಂದ್ಯತೆ, ಲಭ್ಯವಿರುವ ಚಿಕಿತ್ಸಾ ಆಯ್ಕೆಗಳು ಮತ್ತು ಪುನರ್ವಸತಿ ಸೇವೆಗಳ ಕುರಿತು ತಿಳಿಸಿದರು.
ವೈದ್ಯಾಧಿಕಾರಿ ಡಾ.ರಕ್ಷಿತಾ, ಸುದರ್ಶನ್- ಕಭಿ- ಫಿಸಿಯೋಥೆರಪಿಸ್ಟ್, ಸ್ಫೂರ್ತಿ, ಕಭಿ-ಮನಶಾಸ್ತ್ರಜ್ಞ, ಸುನೀಲ್ ಕಭಿ-ಜಿಲ್ಲಾ ಸಂಯೋಜಕರು , ಕನಗ ಸಭಾಪತಿ ಮೊದಲಾದವರು ಹಾಜರಿದ್ದರು.




