ಕಾಂಗ್ರೆಸ್ ಪಕ್ಷಕ್ಕೆ ಒಡೆಯರ್ ಮೇಲೆ ಗೌರವ ಇದ್ದರೆ ನಾಮಪತ್ರ ವಾಪಸ್ ಪಡೆಯಲಿ: ಬಿಜೆಪಿ

2 years ago

ಬೆಂಗಳೂರು: ಮೈಸೂರು ಮಹಾರಾಜರಿಗೆ ಏಕವಚನದಲ್ಲಿ ಮಜಾವಾದಿ ಸಿದ್ದರಾಮಯ್ಯ ಅವರು ಕರೆದಿದ್ದು ಒಂದೆರಡು ಬಾರಿಯಂತೂ ಅಲ್ಲ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಶ್ರೀ ಯದುವೀರ್ ಒಡೆಯರ್ ಅವರು ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧೆಗೆ ಇಳಿದಾಗಿನಿಂದಲೂ ಅವರನ್ನು ತೇಜೋವಧೆ ಮಾಡಲು ಸಕಲ ಪ್ರಯತ್ನವನ್ನೂ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್ಸಿಗರು ದುಂಬಾಲು ಬಿದ್ದು ಕೂತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು ಮಹಾರಾಜರಿಗೆ ಅವಹೇಳನ ಮಾಡಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ರೈಲಿಗೆ ಒಡೆಯರ್ ಹೆಸರಿನ ಬದಲು ಟಿಪ್ಪು ಹೆಸರಿಟ್ಟಿದ್ದು, ಮೈಸೂರು ವಿಮಾನ‌ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ಚಿಂತಿಸಿದ್ದು, ಟಿಪ್ಪು ಪ್ರತಿಮೆ ಮಾಡಲು ಚಿಂತಿಸುತ್ತಿರುವುದು ಒಡೆಯರ್ ಹೆಸರನ್ನು ಸಂಪೂರ್ಣವಾಗಿ ಅಳಿಸಿ ಹಾಕುವ ಹುನ್ನಾರವಲ್ಲವೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತಾದರೂ ಒಡೆಯರ್ ಮೇಲೆ ಗೌರವ, ಅವರ ಋಣದ ಮೇಲೆ ನಿಯತ್ತು ಇದ್ದರೆ, ಕೂಡಲೇ ಕಾಂಗ್ರೆಸ್ ಅಭ್ಯರ್ಥಿಯಿಂದ ನಾಮಪತ್ರ ವಾಪಸ್ ಪಡೆದು ತೋರಿಸಲಿ. ಅಮೇಲೆ ಮೈಸೂರು ಒಡೆಯರ್ ಬಗ್ಗೆ ಮಾತನಾಡುವ ಯೋಗ್ಯತೆ ತೋರಲಿ ಎಂದಿದೆ.

Leave a Reply