ಎಲ್ಲ ಸಮಸ್ಯೆಗೆ ಎಲ್ಲ ಪ್ರಶ್ನೆಗೆ ಉತ್ತರ ಒಂದೇ
ದಿನದಿಂದ ದಿನಕ್ಕೆ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಪ್ರಶ್ನಿಸಿದರೆ, ಧರ್ಮ ಅಪಾಯದಲ್ಲಿದೆ ಎಂಬ ಉತ್ತರವಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ದಿನದಿಂದ ದಿನಕ್ಕೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಪ್ರಶ್ನಿಸಿದರೆ, ಧರ್ಮ ರಕ್ಷಿಸಬೇಕು ಎಂದು ಉತ್ತರಿಸುತ್ತಾರೆ.
ದಿನದಿಂದ ದಿನಕ್ಕೆ ನಿರುದ್ಯೋಗ ಹೆಚ್ಚಾಗಿ ಯುವಜನತೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ ಎಂದು ಹೇಳಿದರೆ, ಮೊದಲು ಧರ್ಮವನ್ನು ಕಾಪಾಡಬೇಕು ಎಂದು ಹೇಳುತ್ತಾರೆ.
ನಮ್ಮ ಊರಿನ ಶಾಲೆಗಳು ಶಿಥಿಲಗೊಂಡಿದೆ, ಸೌಲಭ್ಯ ಸೌಕರ್ಯಗಳು ಮಾಯವಾಗಿದೆ ಎಂದು ಪ್ರಶ್ನಿಸಿದರೆ, ನಮ್ಮ ಶ್ರದ್ಧಾ ಕೇಂದ್ರಗಳು ಒತ್ತುವರಿಯಾಗಿದೆ ಎಂದು ಉತ್ತರಿಸುತ್ತಾರೆ.
ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ, ತಾಯಂದಿರು ಅಪೌಷ್ಟಿಕತೆಯಿಂದ ಉಸಿರು ಚೆಲ್ಲುತ್ತಿದ್ದಾರೆ ಎಂದು ಹೇಳಿದರೆ, ನಮ್ಮ ಧರ್ಮದ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎಂದು ಉತ್ತರಿಸುತ್ತಾರೆ.
ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ, ನುರಿತ ವೈದ್ಯರು ವಿದೇಶ ಸೇರುತ್ತಿದ್ದಾರೆ, ಚಿಕಿತ್ಸೆ ನೀಡಲು ಸಿಬ್ಬಂದಿಯ ಕೊರತೆ ಇದೆ ಎಂದು ಹೇಳಿದರೆ, ನಮ್ಮ ,ನಮ್ಮ ಧಾರ್ಮಿಕತೆಯನ್ನು ಮೆರೆಸೋಣ ಬನ್ನಿ ಎಂದು ಹೇಳುತ್ತಾರೆ.
ಮಾನವೀಯತೆ ಮರೆಯಾಗುತ್ತಿದೆ, ಧಾರ್ಮಿಕತೆಯ ಹೆಸರಿನಲ್ಲಿ ಮನುಷ್ಯತ್ವ ಮಣ್ಣುಸೇರುತ್ತಿದೆ ಮಾನವ ಪ್ರೀತಿ ಉಳಿಸಬೇಕು ಎಂದರೆ, ಜೀವಕ್ಕಿಂತ ಧರ್ಮ ದೊಡ್ಡದು ಎಂದು ಹೇಳುತ್ತಾರೆ
– ಕೆ ಎಸ್ ನಾಗರಾಜ್, ಬೆಂಗಳೂರು




