ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹೋರಾಟ
ಬೆಂಗಳೂರು: ಬಿಬಿಎಂಪಿಯಲ್ಲಿ ಕೆಟಿಪಿಪಿ ಕಾಯಿದೆ ಉಲ್ಲಂಘನೆ ಮಾಡಿ, ಟೆಂಡರ್ ಮಾಡದೇ ಕೊಟ್ಯಂತರ ರೂಪಾಯಿ ಬಿಲ್ಲು ಪಾವತಿ ಮಾಡಿರುವ ಕಾಮಗಾರಿಗಳ ಕುರಿತು ತನಿಖೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಚಳುವಳಿ ಕೆ.ಅಯ್ಯಪ್ಪ, ಜಿಲ್ಲಾಧ್ಯಕ್ಷ ಎನ್.ಪ್ರಸಾದ್ ರಾಜಭವನದಲ್ಲಿ ರಾಜ್ಯಪಾಲರಿಗೆ ದೂರು ನೀಡಿದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಚಳುವಳಿ ಕೆ.ಅಯ್ಯಪ್ಪ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು ಇಲ್ಲ, ಅಧಿಕಾರಿಗಳ ಅಂಧಾ ದರ್ಬಾರ್ ನಿಂದ ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬಿಲ್ಲುಗಳನ್ನು ಪಾವತಿ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆರ್ಥಿಕ ನಷ್ಟವುಂಟು ಮಾಡಿರುತ್ತಾರೆ ಎಂದು ಆರೋಪಿಸಿದರು.
ದಿನಾಂಕ 01.05.2025 ರಂದು ಬೆಂಗಳೂರು ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭನಡೆಸಲು ಮೆ: ಫೆಬ್ರಿಕಾನ ಸಂಸ್ಥೆಯವರ ಖಾತೆಗೆ ರೂ.1,12,49,837-00 (ಒಂದು ಕೋಟಿ ಹನ್ನೆರಡು ಲಕ್ಷದ ನಲವತ್ತೊಂಬತ್ತು ಸಾವಿರದ ಎಂಟು ನೂರು ಮೂವತ್ತೇಳು ರೂ ಮಾತ್ರ) ಗಳನ್ನು ನಿಯಮವನ್ನು ಉಲ್ಲಂಘನೆ ಮಾಡಿ ಪಾವತಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ. ಮುಂದುವರಿದು ಮೇಲ್ಕಂಡ ಮೊತ್ತವನ್ನು ಪಾವತಿ ಮಾಡಲು ರೂ.2,87,50,419-00 ಗಳನ್ನು ಪಾವತಿ ಮಾಡಲು ವಿಷಯ ಸಂಖ್ಯೆ 81/2025-26 ವಲಯ ಆಯುಕ್ತರು (ಪಶ್ಚಿಮ) ರವರು ಮಂಡಿಸಿರುವ ಸಂಖ್ಯೆ ವ.ಆ(ಪ)/ಪಿಆರ್/987/2025-26 ದಿನಾಂಕ 29.04.2025 ರಂತೆ ಟಿಪ್ಪಣಿ ಒಪ್ಪಿಗೆ ಪತ್ರದಂತೆ ಆಡಳಿತಗಾರರ ಅನುಮೋದನೆ ಪಡೆದು ವಲಯ ಆಯುಕ್ತರು ಪಶ್ಚಿಮ, ಜಂಟಿ ಆಯುಕ್ತರು (ಪಶ್ಚಿಮ) ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು (ಕೇಂದ್ರ) ರವರು ಕೆಟಿಪಿಪಿ ಕಾಯಿದೆ ಗಳನ್ನು ಪರಿಶೀಲಿಸದೆ ನಿಯಮಗಳನ್ನು ಪಾಲನೆ ಮಾಡದೆ ಸಂಬಂಧಪಟ್ಟ ಸಂಸ್ಥೆಯವರೊಂದಿಗೆ ಶಾಮೀಲಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಪಾವತಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ ಹಾಗೂ ಬಿಬಿಎಂಪಿಗೆ ಆರ್ಥಿಕ ನಷ್ಟ ಉಂಟುಮಾಡಿರುತ್ತಾರೆ ಎಂದರು.
ಆದ್ದರಿಂದ ಈ ಕೂಡಲೇ ಇದರ ಬಗ್ಗೆ ತನಿಖೆ ಮಾಡಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಎನ್.ಪ್ರಸಾದ್ ಮಾತನಾಡಿ, 2 ಕೋಟಿಗಿಂತ ಅನುದಾನವನ್ನು ಯಾವುದೇ ನಿಯಮಗಳನ್ನು ಪಾಲಿಸದೇ ನೇರವಾಗಿ ಗುತ್ತಿಗೆ ನೀಡಿ, ಹಣ ಬಿಡುಗಡೆ ಮಾಡಲು ಕ್ರಮವಹಿಸಿರುತ್ತಾರೆ. ಬಿಬಿಎಂಪಿ ಎಲ್ಲ ವಲಯಗಳಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಕೆಟಿಪಿಪಿ ಕಾಯಿದೆ ಉಲ್ಲಂಘನೆಯಾಗಿದೆ ಪೌರ ಕಾರ್ಮಿಕರ ದಿನಾಚರಣೆ ಹೆಸರಿನಲ್ಲಿ ಕೊಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಇದರ ವಿರುದ್ದ ಬೃಹತ್ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.




