ಸಕಾಲಕ್ಕೆ ನೀರು, ಮೇವು ಪೂರೈಕೆ: ರೈತರಿಂದ ಡಿಸಿಗೆ ಸನ್ಮಾನ

2 years ago

ಕಲಘಟಗಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳಿಗೆ ಕಿವಿ ಆಗಲು ಬಂದಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ತಾಲೂಕಿನ ವಿವಿಧ ರೈತ ಸಂಘಟನೆಗಳ ಪ್ರಮುಖರು, ರೈತರು ಹಸಿರು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.

ಕಳೆದ ಮೂರನಾಲ್ಕು ತಿಂಗಳು ಬಾಧಿಸಿದ್ದ ಬರಗಾಲ ಸಮಯದಲ್ಲಿ ರೈತರ ಮನವಿಗಳಿಗೆ ಸ್ಪಂದಿಸಿ,  ಜನ,ಜಾನುವಾರುಗಳಿಗೆ ಅಗತ್ಯ  ಕುಡಿಯುವ ನೀರು, ಮೇವು ಬ್ಯಾಂಕ್ ತೆರೆದು ರೈತರ ಬೇಡಿಕೆಗಳಿಗೆ ದಿವ್ಯ ಪ್ರಭು  ತಕ್ಷಣ ಸ್ಪಂದಿಸಿದ್ದರು.

ಕಲಘಟಗಿ ಪಟ್ಟಣಕ್ಕೆ ಆಗಮಿಸಿದ್ದ ದಿವ್ಯ ಪ್ರಭು ಅವರನ್ನು ಉಳವಪ್ಪ ಬಳಿಗಾರ, ನಿಜಗುಣಿ ಕೆಲಗೇರಿ, ರಾಮಣ್ಣ ಬಾರಕೇರ, ವಸಂತ ಡಾಕಪ್ಪನವರ, ಮಹಾದೇವ ಕಂಠೆಪ್ಪನವರ,ಯಲ್ಲಪ್ಪ ಧರೆಣ್ಣವರ ನೇತೃತ್ವದಲ್ಲಿ ರೈತರು ಡಿಸಿ ಅವರಿಗೆ ಗೌರವ ಸಲ್ಲಿಸಿದರು. ದಿವ್ಯ ಪ್ರಭು ಅವರ ಕಾರ್ಯಗಳ ಕುರಿತು ವೇದಿಕೆಯಲ್ಲಿ ಮಾತನಾಡಿದರು.

Leave a Reply