ಕಲಘಟಗಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳಿಗೆ ಕಿವಿ ಆಗಲು ಬಂದಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ತಾಲೂಕಿನ ವಿವಿಧ ರೈತ ಸಂಘಟನೆಗಳ ಪ್ರಮುಖರು, ರೈತರು ಹಸಿರು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಕಳೆದ ಮೂರನಾಲ್ಕು ತಿಂಗಳು ಬಾಧಿಸಿದ್ದ ಬರಗಾಲ ಸಮಯದಲ್ಲಿ ರೈತರ ಮನವಿಗಳಿಗೆ ಸ್ಪಂದಿಸಿ, ಜನ,ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು, ಮೇವು ಬ್ಯಾಂಕ್ ತೆರೆದು ರೈತರ ಬೇಡಿಕೆಗಳಿಗೆ ದಿವ್ಯ ಪ್ರಭು ತಕ್ಷಣ ಸ್ಪಂದಿಸಿದ್ದರು.
ಕಲಘಟಗಿ ಪಟ್ಟಣಕ್ಕೆ ಆಗಮಿಸಿದ್ದ ದಿವ್ಯ ಪ್ರಭು ಅವರನ್ನು ಉಳವಪ್ಪ ಬಳಿಗಾರ, ನಿಜಗುಣಿ ಕೆಲಗೇರಿ, ರಾಮಣ್ಣ ಬಾರಕೇರ, ವಸಂತ ಡಾಕಪ್ಪನವರ, ಮಹಾದೇವ ಕಂಠೆಪ್ಪನವರ,ಯಲ್ಲಪ್ಪ ಧರೆಣ್ಣವರ ನೇತೃತ್ವದಲ್ಲಿ ರೈತರು ಡಿಸಿ ಅವರಿಗೆ ಗೌರವ ಸಲ್ಲಿಸಿದರು. ದಿವ್ಯ ಪ್ರಭು ಅವರ ಕಾರ್ಯಗಳ ಕುರಿತು ವೇದಿಕೆಯಲ್ಲಿ ಮಾತನಾಡಿದರು.



