ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಸಂಘಪರಿವಾರ ದೊಡ್ಡ ಸ್ಟೇಜ್ ಹಾಕಿ ಇಡೀ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ. (ಬಾಂಗ್ಲಾ ದೇಶದ ವಿಷಯ) ಪೊಲೀಸ್ ಕಮೀಷನರ್ ಅಗ್ರವಾಲ್ ರಿಗೆ ಈ ರೀತಿ ಅಷ್ಟು ಅಗಲದ, ನಗರದ ಅತ್ಯಂತ ಪ್ರಮುಖ ರಸ್ತೆಯನ್ನು ಪೂರ್ತಿ ಮುಚ್ಚಿ ಧರಣಿ ನಡೆಸುವುದರಲ್ಲಿ ಯಾವುದೇ ಸಮಸ್ಯೆ ಕಂಡಿಲ್ಲ. ಅನುಮತಿ, ರಕ್ಷಣೆ ಎರಡೂ ಒದಗಿಸಲಾಗಿದೆ. ರಸ್ತೆ ಗುಂಡಿ ಮುಚ್ಚಿ ಎಂದು ಆಗ್ರಹಿಸಿ ರಸ್ತೆಗೆ ಇಳಿಯದೆ ಮೂಲೆಯಲ್ಲಿ ಕೂತು ಜನಪರ ಸಂಘಟನೆಗಳು ಧರಣಿ ಮಾಡುವುದು ಮಾತ್ರ ಮಂಗಳೂರಿನಲ್ಲಿ ಅಪರಾಧ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ಯಾಲೆಸ್ತೀನ್ ನಲ್ಲಿ ಶಾಂತಿ ನೆಲೆಸಲಿ, ನರಮೇಧ ನಿಲ್ಲಲಿ ಎಂದು ಒತ್ತಾಯಿಸಿ ಎಡಪಕ್ಷಗಳ ಐವತ್ತು, ಅರವತ್ತು ಜನ ಮಿನಿ ವಿಧಾನ ಸೌಧದ ಬಳಿಯ ಫುಟ್ ಪಾತ್ ನಲ್ಲಿ ಪ್ರದರ್ಶನ ಮಾಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಅನುಮತಿ ನಿರಾಕರಿಸಿ fIR ಹಾಕಲಾಗುತ್ತದೆ.
ಸಂಘಪರಿವಾರ ಬಾಂಗ್ಲಾ ದೇಶದ ಬೆಳವಣಿಗೆಗಳನ್ನು ಇಟ್ಟುಕೊಂಡು ಉದ್ರೇಕಕಾರಿ ಘೋಷಣೆ, ಭಾಷಣಗಳನ್ನು ಇಡೀ ರಸ್ತೆ ಬಂದ್ ಮಾಡಿ ನಡೆಸಿದರೂ ಕಾನೂನು ಸುವ್ಯವಸ್ಥೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಸಂಚಾರಕ್ಕೂ ಸಮಸ್ಯೆ ಆಗುವುದಿಲ್ಲ. ಇದು ಕಮೀಷನರ್ ಅಗ್ರವಾಲ್ ನ್ಯಾಯ. ಇದು ಪೊಲೀಸ್ ರಾಜ್ ಅಲ್ಲದೆ ಮತ್ತೇನು?
ಸ್ಪೀಕರ್ ಖಾದರ್ ರಿಗೆ ಪಾಪ ಇದೆಲ್ಲಾ ಕಾಣುವುದೂ ಇಲ್ಲ, ಅವರು ಪ್ರತಿಕ್ರಿಯಿಸುವುದೂ ಇಲ್ಲ. ಅವರಿಗೆ “ಪಕ್ಷ” ಇಲ್ಲ. ಅವರು ಎಲ್ಲರ “ಸ್ಪೀಕರ್”.
– ಮುನೀರ್ ಕಾಟಿಪಳ್ಳ




