SDPI ಹುಮನಾಬಾದ್ ವಲಯದ ಬೂತ್ ನಾಯಕರ ಸಂಘಟನಾ ಸಭೆ

10 months ago

ಬೀದರ್: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷವು ಹುಮನಾಬಾದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ನಾಯಕರುಗಳಿಗೆ ವಿಶೇಷ ಸಂಘಟನಾ ಸಭೆಯನ್ನು ನಗರದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿತ್ತು.

ಈ ಮಹತ್ವದ ಸಭೆಯು ಜಿಲ್ಲಾ ಅಧ್ಯಕ್ಷ ಶೇಖ್ ಮಕ್ಸೂದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಮತ್ತು ರಾಜ್ಯ ಚುನಾವಣಾ ಉಸ್ತುವಾರಿಯಾದ ಅಪ್ಸರ್ ಕೊಡ್ಲಿಪೇಟೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಸಭೆಯಲ್ಲಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ, ಬೂತ್ ಮಟ್ಟದ ಕಾರ್ಯಕರ್ತರ ತೀವ್ರ ಚಟುವಟಿಕೆಗಳು ಹಾಗೂ ಸ್ಥಳೀಯ ಜನರ ಸಮಸ್ಯೆಗಳತ್ತ ದಿಟ್ಟ ದೃಷ್ಟಿಕೋನವೇ ಪಕ್ಷದ ಬಲಕ್ಕೆ ಅವಶ್ಯಕ. ಜನರ ಧ್ವನಿಯಾಗಿ, ಹೋರಾಟದ ಮೂಲಕ ನೈತಿಕ ಬಲ ಗಳಿಸಿ, ಚುನಾವಣಾ ಸಮರ್ಥತೆಯನ್ನು ಸಾಧಿಸಬೇಕು ಎಂಬ ಸಂದೇಶವನ್ನು ನೀಡಿದರು. ಬೂತ್ ಮಟ್ಟದ ನಾಯಕರ ಚಟುವಟಿಕೆಗಳು ಪಕ್ಷದ ನಿಜವಾದ ಬೆನ್ನೆಲುಬು ಆಗಿವೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪಕ್ಷದ 17ನೇ ಸಂಸ್ಥಾಪನಾ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ಸಾಂಸ್ಕೃತಿಕ, ಸಾಮಾಜಿಕ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.

ಜಿಲ್ಲಾ ಉಪಾಧ್ಯಕ್ಷ ಮಹೆಬೂಬ್ ಸದರ, ಖಜಾಂಚಿ ಅಯ್ಯೂಬ್, ಕಾರ್ಯದರ್ಶಿ ತೌಹೀದ್, ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಮೊಹಿಸಿನ್, ಇಬ್ರಾಹಿಂ, ಇಸ್ಮಾಯಿಲ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply