ಕನ್ನಡದ ಅಸ್ಮಿತೆ, ನಾಡಿನ ಹಿತ ಕಾಪಾಡುವುದು ಬೇಕಿಲ್ಲ ಲೂಟಿವೊಂದೇ ಅಜೆಂಡಾ: ಬಿಜೆಪಿ

1 year ago

ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕನ್ನಡದ ಬಗ್ಗೆ ತಿಳುವಳಿಕೆ ಇಲ್ಲ ಎಂದು ಬಹಿರಂಗವಾಗಿಯೇ ಹೇಳಿ ಉಳಿದುಕೊಳ್ಳಲು ಕರ್ನಾಟಕದಲ್ಲಿ ಮಾತ್ರ ಸಾಧ್ಯ.

ಇಂಥ ಅರ್ಹತೆ ಇಲ್ಲದ ಸಚಿವರೊಬ್ಬರು ತಮಿಳುನಾಡಿನಲ್ಲಿ ತಮಿಳಿನ ಬಗ್ಗೆ ತಿಳುವಳಿಕೆ ಇಲ್ಲ ಎಂದು ಹೇಳಿದ್ದರೆ, ಇಷ್ಟೊತ್ತಿಗೆ ಸಚಿವ ಸ್ಥಾನ ಕಳೆದುಕೊಂಡು ಗಡಿಪಾರು ಆಗಬೇಕಿತ್ತು. ಆದರೆ ದುರ್ದೈವ ಕನ್ನಡಿಗರು ವಿಶಾಲ ಹೃದಯದವರು ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ನಮ್ಮ ಮಕ್ಕಳ ಭವಿಷ್ಯ ಹಾಳಾದರೂ ಪರವಾಗಿಲ್ಲ ಎಂದು ಮೌನವಹಿಸಿದ್ದೇವೆ.

ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿದೆ ಉತ್ತಮ ಸೌಲಭ್ಯ ಕಲ್ಪಿಸಿದ್ದೇವೆ ನಿಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿ ಎಂದು ಹೇಳಬೇಕಾಗಿದ್ದ ಅಯೋಗ್ಯ ಶಿಕ್ಷಣ ಸಚಿವ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸುವುದು ಪೋಷಕರ ವಿವೇಚನೆಗೆ ಬಿಟ್ಟಿದ್ದು ಎನ್ನುವ ಮೂಲಕ ಸರ್ಕಾರಿ ಶಾಲೆಗಳಿಗೆ ತಿಲಾಂಜಲಿ ಇಡಲು ಹೊರಟಿದ್ದಾರೆ.

ಕನ್ನಡದ ಸಾಮಾನ್ಯ ಪದ ಬರೆಯಲು ಬಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಕನ್ನಡದ ಆಸ್ಮಿತೆಗೆ ಕೊಳ್ಳಿ ಇಡುತ್ತಿದ್ದಾರೆ. ಭ್ರಷ್ಟ ಸಿದ್ದರಾಮಯ್ಯ ಸರ್ಕಾರಕ್ಕೆ ಕನ್ನಡದ ಅಸ್ಮಿತೆ, ನಾಡಿನ ಹಿತ ಕಾಪಾಡುವುದು ಬೇಕಿಲ್ಲ. ಲೂಟಿವೊಂದೇ ಕಾಂಗ್ರೆಸ್ ನ ಅಜೆಂಡಾವಾಗಿದೆ.

– ಬಿಜೆಪಿ

Leave a Reply