‘ಬಹುರೂಪಿ’ಯ ಹೊಸ ಪ್ರಕಟಣೆ ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ

2 years ago

ಇದೊಂದು ಮಹತ್ವದ ಕೃತಿ. ಸುಭದ್ರ ಸರ್ಕಾರಿ ನೌಕರಿಗೆ ಬೆನ್ನು ಹಾಕಿ ತಾವೇ ಖುದ್ದಾಗಿ ಹಳ್ಳಿಗಳತ್ತ ತೆರಳಿ, ಹಳ್ಳಿಗಳನ್ನು ಕಟ್ಟಿದ ಸಮಾಜ ವಿಜ್ಞಾನಿಯ ಕಥನ.

ಡಾ ಪ್ರಕಾಶ ಭಟ್ ಅವರ ಕಾರಣದಿಂದಾಗಿ ಇಂದು 75 ಹಳ್ಳಿಗಳ ಮುಖದಲ್ಲಿ ಸಂತಸದ ಬುಗ್ಗೆ ಇದೆ. 7 ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತ್ಮವಿಶ್ವಾಸವಿದೆ. ಇಷ್ಟು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೇಗೆ ಬರಗಾಲವನ್ನು ಒದ್ದು ಓಡಿಸಬೇಕು ಎನ್ನುವ ಮಾದರಿಯನ್ನು ಇವರು ಹಾಕಿಕೊಟ್ಟಿದ್ದಾರೆ. ಇದರ ಭಾಗವಾಗಿಯೇ 20 ಲಕ್ಷಕ್ಕೂ ಹೆಚ್ಚು ಮರಗಳು ನೆಡಲ್ಪಟ್ಟಿವೆ. 50 ಕೋಟಿ ಲೀಟರ್ ನೀರನ್ನು ಸಂಗ್ರಹಿಸಲಾಗಿದೆ.

ಈ ಎಲ್ಲಾ ಕೆಲಸಗಳಿಗೆ ಸಾಕ್ಷಿಯಾದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ತೇಜಸ್ವಿ ಕಟ್ಟೀಮನಿ ಅವರು-   ಡಾ ಪ್ರಕಾಶ  ಭಟ್ ಅವರ ಈ  ಕಥನ  ಅಭಿವೃದ್ಧಿ ಚಳುವಳಿಯೊಂದರ ಆತ್ಮಕಥೆಯಂತೆ  ಗೋಚರಿಸುತ್ತದೆ, ಅಭಿವೃದ್ದಿ ಚಳುವಳಿಗೊಂದು  ದೇಹ ಇರುತ್ತದೆ,  ಆತ್ಮ ಇರುತ್ತದೆ, ಆತ್ಮಕಥೆಯೂ ಇರುತ್ತದೆ, ಮನಸ್ಸೂ ಇರುತ್ತದೆ, ಅದಕ್ಕೂ ಹಸಿವು-ನೀರಡಿಕೆ ಆಗುತ್ತದೆ. ಕೆಲಸಗಾರರ ಏಳುಬೀಳುಗಳೊಂದಿಗೆ ಅಭಿವೃದ್ಧಿ ಹಾಸು ಹೊಕ್ಕಾಗಿದೆ. ಈ ಕಾರಣದಿಂದ ಈ ಗ್ರಂಥ ಡಾ. ಭಟ್ ಅವರ ಬದುಕಿನ ಅತ್ಯಂತ ಫಲಪ್ರದವಾದ ಕಾರ್ಯದ ಆತ್ಮಕಥೆಯಾಗಿದೆ ಎನ್ನುತ್ತಾರೆ.

ಸಮಾಜ ವಿಜ್ಞಾನಕ್ಕೆ, ಗ್ರಾಮೀಣ ಅಭಿವೃದ್ದಿಗೆ ಇದೊಂದು ಮಹತ್ವದ ಪಠ್ಯವೇ ಸರಿ.  

ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ
ಲೇ: ಡಾ ಪ್ರಕಾಶ ಭಟ್
ಪ್ರ: ಬಹುರೂಪಿ
ಪುಟ: 280
ಬೆಲೆ: ರೂ 300

ಪ್ರತಿಗಳಿಗಾಗಿ ಸಂಪರ್ಕಿಸಿ: 70191 82729

Leave a Reply