ಕೋಟ್ಯಾಂತರ ಭಾರತೀಯರನ್ನು ತಲುಪುತ್ತಿರುವ ಧ್ರುವ ರಾಠಿ ವೀಡಿಯೋ ದೊಡ್ಡ ಚರ್ಚೆ, ಅಚ್ಚರಿಗೆ ಕಾರಣವಾಗಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ “ನರೇಂದ್ರ ಮೋದಿ (ಆಡಳಿತದ) ವಿರುದ್ದ ಮಾತಾಡಬಾರದು, ಅದರಿಂದ ಮತಗಳಿಗೆ ಹೊಡೆತ ಬೀಳುತ್ತದೆ” ಎಂಬ ವಾದ ಮಂಡಿಸುವ ಟಿಪಿಕಲ್ ರಾಜಕಾರಣಿಗಳು, ಗೋಡೆಯ ಮೇಲೆ ಕುಳಿತವರು, ಹಾಗೆಯೆ ನೇರವಾಗಿ ಮಾತಾಡಲು ಧೈರ್ಯ ಸಾಲದ ಸಾಂಸ್ಕೃತಿಕ ಲೋಕದವರು ನರೇಂದ್ರ ಮೋದಿ ದುರಾಡಳಿತವನ್ನೇ ನೇರವಾಗಿ ಗುರಿಯಾಗಿಸಿರುವ ಧೃವ ರಾಠಿಯ ವೀಡಿಯೋಗಳನ್ನು ಜನ ಮುಗಿ ಬಿದ್ದು ನೋಡುತ್ತಿರುವುದನ್ನು ಅರ್ಥೈಸಲಾಗದೆ ಅಚ್ಚರಿ ವ್ಯಕ್ತ ಪಡಿಸುತ್ತಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ. ಜನರು ಮೋದಿ ಆಳ್ವಿಕೆಯಿಂದ ರೋಸಿ ಹೋಗಿದ್ದಾರೆ. ಅವರಿಗೆ ಈಗಿನ ಸರ್ವಾಧಿಕಾರಿ ಕಾರ್ಪೊರೇಟ್ ಪ್ರಭುತ್ವವನ್ನು ಧೈರ್ಯದಿಂದ ನೇರವಾಗಿ ಎದುರಿಸುವವರು ಬೇಕು. ಆ ಕುರಿತು ನಾಡಿನ ಜನಪರರು ಮುಂದಡಿ ಇಡಲು ಇದು ಸಕಾಲ.
ಫ್ಯಾಸಿಸ್ಟ್ ಬಿಜೆಪಿ ಸೋಲಿಸಲು “ಯಾವ ಕಡೆಗೂ ಸಲ್ಲುವ, ಮೋದಿ ಬಳಗದ ಆವೇಶಕ್ಕೆ ಬೆದರುವ” ಅವಕಾಶವಾದಿ ರಾಜಕಾರಣಿ, ಪಕ್ಷಗಳನ್ನು ಸದ್ಯ ಬೆಂಬಲಿಸುವುದು ಅನಿವಾರ್ಯವಾದರೂ, ಚುನಾವಣಾ ಸ್ಪರ್ಧೆಗೆ ಸೈದ್ದಾಂತಿಕ ಸ್ಪಷ್ಟತೆ ನೀಡಲು ನಾವೆಲ್ಲ ಜೊತೆಯಾಗಿ ದುಡಿಯಬೇಕಿದೆ. ಚುನಾವಣೆಯ ನಂತರವಂತೂ ಈಗಿನ ಕಾರ್ಪೊರೇಟ್ ಪ್ರಭುತ್ವದ ಎದುರಾಗಿ ಈ ಅವಕಾಶವಾದಿ ರಾಜಕಾರಣದ ಬದಲಿಗೆ ಸ್ಪಷ್ಟ ಅಜೆಂಡಾ, ಸೈದ್ದಾಂತಿಕ ತಿಳುವಳಿಕೆಯೊಂದಿಗೆ ದೊಡ್ಡದಾದ ಮೂಮೆಂಟ್ ಕಟ್ಟಲು ಮುಂದಾಗಬೇಕಿದೆ. ಭಾರತದ ಜನ ಸಮೂಹ ಅದನ್ನು ಬಯಸುತ್ತಿದೆ. ನಿರ್ವಾತವನ್ನು ತುಂಬುವುದು ಆಗಲೇಬೇಕಾದ ಕರ್ತವ್ಯ. ಧೃವ ರಾಠಿ ವೀಡಿಯೋಗೆ ದೊರಕುತ್ತಿರುವ ಭರ್ಜರಿ ಸ್ವೀಕೃತಿ ನೀಡುತ್ತಿರುವ ಸಂದೇಶ ಅದು. ಮೋದಿ, RSS, ಕಾರ್ಪೊರೇಟ್ ಕೂಟ ಸೋಲಿಸಲಾಗದ ಅಭೇದ್ಯ ಶಕ್ತಿ ಏನಲ್ಲ, ಅದು ಕುಸಿಯಲು ಸಿದ್ದಗೊಂಡಿರುವ ಕೋಟೆ. ಇಂಕ್ವಿಲಾಬ್ ಜಿಂದಾಬಾದ್.
- ಮುನೀರ್ ಕಾಟಿಪಳ್ಳ, ಸಾಮಾಜಿಕ ಹೋರಾಟಗಾರರು




