ಕಮರ್ಶಿಯಲ್ ಸಿನೇಮಾ ಅಂದರೆ ದೂರ ಇರುವ ಸಾವಿರಾರು ಜನರನ್ನು “ಲ್ಯಾಂಡ್ ಲಾರ್ಡ್” ಥಿಯೇಟರಿಗೆ ಸೆಳೆದಿದೆ
ನಾನೂ ಲ್ಯಾಂಡ್ ಲಾರ್ಡ್ ಸಿನೆಮಾ ನೋಡಿದೆ.
ಭಾರತ ಸಂವಿಧಾನದ ಆಶಯಗಳ ಪರವಾಗಿ ಧ್ವನಿ ಎತ್ತುವುದು, ಸಹ ನಾಗರಿಕರನ್ನು ಪ್ರಭಾವಿಸುವುದು ದೇಶದ ಪ್ರಜೆಗಳ ಕರ್ತವ್ಯ. ಸಾಂಸ್ಕೃತಿಕ ಕ್ಷೇತ್ರವೂ, ಕಲಾವಿದರೂ ಇದಕ್ಕೆ ಹೊರತಲ್ಲ. ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವದಂತಹ ಸಂವಿಧಾನಾತ್ಮಕ ಮತ್ತು ಮಾನವೀಯ ಮೌಲ್ಯಗಳನ್ನು ನಮ್ಮ ವೃತ್ತಿ, ವ್ಯವಹಾರ, ಫ್ರಂಡ್ ಶಿಪ್ ಸರ್ಕಲ್ ನಲ್ಲಿ ಮಾತನಾಡುವುದು ಬೇಡ, ಬೆರಸುವುದು ಬೇಡ ಎಂದು ಕೆಲವರು ಹೇಳುವುದು ಇದೆ. ಈ ಎಲ್ಲಾ ಸ್ಪೇಸ್ ಗಳನ್ನು ಬಿಟ್ಟರೆ ಮತ್ತೆಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದು, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಮರ್ಶಿಯಲ್ ಸಿನೇಮಾ ಅಂದರೆ ಸ್ವಲ್ಪ ದೂರ ಇರುವ ನಮ್ಮಂತಹ ಸಾವಿರಾರು ಜನರನ್ನು “ಲ್ಯಾಂಡ್ ಲಾರ್ಡ್” ಥಿಯೇಟರಿಗೆ ಸೆಳೆದಿದೆ. ದುನಿಯಾ ವಿಜಯ್, ಜಡೇಶ್ ಕನ್ನಡ ಸಿನೆಮಾ ರಂಗದಲ್ಲಿ ಭಿನ್ನ ದಾರಿ ತುಳಿದಿದಾರೆ, ದೊಡ್ಡ ಸಾಹಸಕ್ಕೆ ಮುಂದಾಗಿದ್ದಾರೆ. ಅವರು ಮತ್ತು ಇಡೀ ತಂಡ ಅಭಿನಂದನಾರ್ಹರು. ರಚಿತಾ ರಾಮ್, ರಾಜ್ ಬಿ ಶೆಟ್ಟಿ, ರಿತನ್ಯಾ, ಗೆಳೆಯರಾದ ಸಂಪತ್ ಮೈತ್ರೇಯ ಮತ್ತು ಎಲ್ಲರ ಅಭಿನಯ ಅಮೋಘ.
ನಮ್ಮ ಜನ ಕೇವಲ ಮನರಂಜನೆ, ಗ್ಲಾಮರ್ ಪರ ಇಲ್ಲ, ಅವರು ಸತ್ಯ, ಸರಳತೆ, ಮಾನವಿಯ ಗುಣ, ಶ್ರಮ ಜೀವಿಗಳ ಪರ ಇದ್ದಾರೆ ಅನ್ನುವುದು ಇತ್ತೀಚೆಗೆ ಅವರು ರಿಯಾಲಿಟಿ ಶೋ ಗಳಿಗೆ ಸ್ಪಂದಿಸುವ ರೀತಿ ನೋಡಿ, ಒಳ್ಳೆಯ ಸಿನೆಮಾಗಳಿಗೆ ಸ್ಪಂದಿಸುತ್ತಿರುವ ರೀತಿ ನೋಡಿ ತಿಳಿಯಬಹುದು. ಲ್ಯಾಂಡ್ ಲಾರ್ಡ್ ಸಿನೆಮಾಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಿನೇಮಾದಲ್ಲಿನ ಸಂದೇಶ ಅದು ನಮ್ಮದೇ ಹೃದಯದ ಕೂಗು ಅನಿಸುತ್ತಿದೆ ಎಲ್ಲರಿಗೂ.
ಎಲ್ಲರೂ ಸಿನೇಮಾ ನೋಡಿ. ಭಾರತಕ್ಕೆ, ಸಂವಿಧಾನಕ್ಕೆ ಜಯಕಾರ ಕೂಗಿ.
– ಜನಾರ್ದನ ಕೆಸರಗದ್ದೆ




