ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನಿವೇಶನ ಹಂಚಿಕೆ

4 months ago

ಧಾರವಾಡ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಧಾರವಾಡ ವಲಯದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿದ ವಸತಿ ನಿವೇಶನಗಳಿಗೆ ಈಗಾಗಲೇ ಹಣ ಸಂದಾಯ ಮಾಡಿದ ಕೈಗಾರಿಕೋದ್ಯಮಿಗಳಿಗೆ, ಅರ್ಜಿದಾರರಿಗೆ ಜನೆವರಿ 21, 2026 ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಪೋಲಿಸ್ ಠಾಣೆ ಹತ್ತಿರದ ಡಾ.ಬಿ.ಎಸ್. ಕರ್ಕಿ ಕನ್ನಡ ಸಭಾ ಭವನದಲ್ಲಿ ಚೀಟಿ ಎತ್ತುವ (Lottery System)  ಮುಖಾಂತರ ನಿವೇಶನ ಸಂಖ್ಯೆಯನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಜನವರಿ 21, 2026 ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಅಶೋಕ ನಗರದಲ್ಲಿರುವ ಪೋಲಿಸ್ ಠಾಣೆ ಹತ್ತಿರದ ಡಾ‌. ಡಿ.ಎಸ್. ಕರ್ಕಿ ಕನ್ನಡ ಸಭಾ ಭವನದಲ್ಲಿ ಹಣ ಸಂದಾಯ ಮಾಡಿದ ಕೈಗಾರಿಕೋದ್ಯಮಿಗಳು, ಅರ್ಜಿದಾರರರು ಹಾಜರಿರಬೇಕು. ತಮ್ಮ ಅನುಪಸ್ಥಿತಿಯಲ್ಲಿ ಲಿಖಿತವಾಗಿ ತಮ್ಮಿಂದ ಪ್ರತಿನಿಧಿಯನ್ನು ನಿಯೋಜಿಸಿ ನಿವೇಶನದ ಸಂಖ್ಯೆಯನ್ನು ಅಂತಿಮಗೊಳಿಸಿಕೊಳ್ಳಲು ತಿಳಿಸಿದೆ. ಇಲ್ಲವಾದಲ್ಲಿ ಮಂಡಳಿಯಿಂದ ನಿವೇಶನವನ್ನು ಅಂತಿಮಗೊಳಿಸಲಾಗುವುದು. 

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಲಕ್ಕಮ್ಮನಹಳ್ಳಿ ಕೈ.ಪ್ರ. ಧಾರವಾಡ ಕಚೇರಿಗೆ ಸಂಪರ್ಕಿಸಬಹುದು.

Leave a Reply