ಹಿಂದುಳಿದವರ ಸಾಮಾಜಿಕ, ಆರ್ಥಿಕ ಸಮಿಕ್ಷೆಯ ಆಯೋಗದ ವರದಿ ಜಾರಿ ಮಾಡಿ: ಬಿ ಕೆ ಹರಿಪ್ರಸಾದ್

1 year ago

ಶಿಕ್ಷಣ, ಉದ್ಯೋಗ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ “ಒಬಿಸಿ” ಮೀಸಲು ಪ್ರಮಾಣವನ್ನು ಹಾಲಿ ಇರುವ ಶೇ.23ರಿಂದ ಶೇ.42ಕ್ಕೆ ಹೆಚ್ಚಿಸಲು ನಿರ್ಧರಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು.

ತೆಲಂಗಾಣ ರಾಜ್ಯದಲ್ಲಿ ನಡೆಸಿದ ಜಾತಿ ಸಮೀಕ್ಷೆ ಕಾರಣಕ್ಕಾಗಿ ಅದರನ್ವಯ ಜನಸಂಖ್ಯಾವಾರು ಮೀಸಲು ಹೆಚ್ಚಳಕ್ಕೆ ಸಹಕಾರಿಯಾಗಿದ್ದು, ಈ ನಡೆ ನಮ್ಮ ರಾಜ್ಯಕ್ಕೂ ಮಾದರಿಯಾಗಬೇಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸಿದ್ದಪಡಿಸಿರುವ ಹಿಂದುಳಿದವರ ಸಾಮಾಜಿಕ, ಆರ್ಥಿಕ ಸಮಿಕ್ಷೆಯ ಆಯೋಗದ ವರದಿ ಸಿದ್ಧವಾಗಿದೆ.

ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯ ಘೋಷಣೆಯಂತೆ ಹಾಗೂ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರ ನಿಲುವಿನಂತೆ ಆಯೋಗದ ವರದಿಯನ್ನು ಜಾರಿ ಮಾಡಿ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ಮುಖ್ಯಮಂತ್ರಿ ಶ್ರೀ Siddaramaiah  ಅವರಲ್ಲಿ ಒತ್ತಾಯಿಸುತ್ತೇನೆ.

– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ

Leave a Reply