ನೈತಿಕತೆ ಇದ್ದರೆ ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು: ಬಿ. ಶ್ರೀರಾಮುಲು

10 months ago

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ಲೋಕಸಭೆ ಚುನಾವಣೆ ಸಮಯದಲ್ಲಿ ನುಂಗಿ ನೀರು ಕುಡಿದಿರುವ ಬಳ್ಳಾರಿ ಸಂಸದ ತುಕಾರಾಮ್‌ ಹಾಗೂ ಕಾಂಗ್ರೆಸ್ ಶಾಸಕರಿಗೆ ಕನಿಷ್ಠ ಪಕ್ಷ ನೈತಿಕತೆ ಇದ್ದರೆ ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಸಂಸದ ಇ.ವಿ.ತುಕರಾಮ್‌, ಶಾಸಕರಾದ ಬಿ.ನಾಗೇಂದ್ರ, ಜೆ.ಎನ್‌.ಗಣೇಶ್‌, ನಾ.ರಾ.ಭರತ ರೆಡ್ಡಿ, ಡಾ.ಶ್ರೀನಿವಾಸಮೂರ್ತಿ ಲಪಟಾಯಿಸಿರುವುದು ಇ.ಡಿ ದಾಳಿಯಿಂದಲೇ ಸಾಬೀತಾಗಿದೆ. ಇವರು ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರೆಯುತ್ತಾರೆ ಎಂದರು.

ತುಕಾರಾಮ್‌ ಸೇರಿದಂತೆ ಯಾರು ಕೂಡ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ತಮ ಸ್ಥಾನಕ್ಕೆ ಗೌರವಯುತವಾಗಿ ರಾಜೀನಾಮೆ ನೀಡಲಿ. ಇಲ್ಲದಿದ್ದರೆ ಮತದಾರರಿಗೆ ಹಣ ಹಂಚಿಕೆ ಮಾಡಿರುವ ಆರೋಪದ ಮೇಲೆ ಚುನಾವಣಾ ಆಯೋಗ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು. 

ಸಂಸದ ತುಕಾರಾಮ್‌, ಶಾಸಕರಾದ ನಾರಾಭರತ್‌ ರೆಡ್ಡಿ, ಡಾ.ಶ್ರೀನಿವಾಸ, ಜೆ ಎನ್‌ ಗಣೇಶ್‌ ಮನೆ ಮೇಲೆ ಇಡಿ ದಾಳಿ ಆಗಿದೆ. ತಾವು ಸಾಚಾಗಳು ಅಂತ ಇವರು ಬಹಳ ಮಾತಾಡುತ್ತಿದ್ದರು. ಮಾಡೋದು ಅನಾಚಾರ, ಮನೆ ಮುಂದೆ ಬೃಂದಾವನ ಎಂದರು.

Leave a Reply