ಅಲೆಮಾರಿ ಬುಡ್ಗ ಜಂಗಮರಿಗೆ ನಾಗರೀಕ ಸೌಲಭ್ಯ ಕೊಡಿ

1 year ago

ಕರಡಿ ಕಾಟ ತಪ್ಪಿಸಿ ಎಂದು ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ: ಜಿಲ್ಲಾ  ಬುಡ್ಗ ಜಂಗಮ ಜನಾಂಗದವರಿಗೆ ನಾಗರಿಕ ಸೌಲಭ್ಯ  ನೀಡಿ ಮತ್ತು  ಕರಡಿ ಇತ್ಯಾದಿ  ಪ್ರಾಣಿಗಳಿಂದ ಆಗುತ್ತಿರುವ  ಪ್ರಾಣ ಭಯವನ್ನು  ತಪ್ಪಿಸಿ ಎಂದು ಕರ್ನಾಟಕ ಅಲೆಮಾರಿಗಳ ಒಕ್ಕೂಟ (ಬುಡ್ಗ ಜಂಗಮ) ಸಂಘಟನೆಯ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಾಗರೀಕ ಮೂಲ ಭೂತ ಸೌಲಭ್ಯಗಳಿಂದ ವಂಚಿತರಾಗಿರುವ ದಾವಣಗೆರೆ  ರಸ್ತೆಯಲ್ಲಿರುವ  ಡಾ.ಅಂಬೇಡ್ಕರ್ ಬುಡ್ಗ ಜಂಗಮ ಕಾಲೋನಿ ಜನ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮುದಾಯ ಬೇಡಿಕೆ ಈಡೇರಿಸಲು  ಆಗ್ರಹಿಸಿದರು.

ಧಮ್ಮ ಸ್ಕೂಲ್  ಆಫ್ ಡ್ರಾಮಾ ಸಂಸ್ಥೆಯ ನಿರ್ದೇಶಕ ವಿಶ್ವ  ಸಾಗರ ಮಾತನಾಡಿ, ಅಲೆಮಾರಿ ಬುಡ್ಗ ಜಂಗಮ ಜನಾಂಗದವರು ಹಲವು ವರ್ಷಗಳಿಂದ ಈ ಕಾಲೋನಿಯಲ್ಲಿ ವಾಸವಾಗಿದ್ದು, ನಾಗರೀಕ ಸೌಲಭ್ಯವಂತೂ ಮರೀಚಿಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ  ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್, ದಲಿತ ಮುಖಡ ದುರ್ಗಾ ಹನುಮಂತಪ್ಪ, ಅಲೆಮಾರಿ ಒಕ್ಕೂಟದ ಅಧ್ಯಕ್ಷರಾದ K M ನಾಗರಾಜ್, ಜಿಲ್ಲಾ  ಅಲೆಮಾರಿ  ಬುಡ್ಗ ಜಂಗಮ ಜನಾಂಗದ ಜಿಲ್ಲಾ  ಅಧ್ಯಕ್ಷ ವಸಂತಕುಮಾರ್, ವೀರೇಶ, ವಸಂತು ಸೇರಿ ಹಲವು ಮುಖಂಡರು ಹಾಜರಿದ್ದರು.

Leave a Reply