ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರ ಗುಂಪು ಜೂಜಾಡುತ್ತಿದ್ದ ಸ್ಥಳಕ್ಕೆ ಏಕಾಏಕಿ ನುಗ್ಗಿದ 6 ಮುಸುಕುಧಾರಿ ಗ್ಯಾಂಗ್, ಆಟವಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಅವರನ್ನು ವಿವಸ್ತ್ರಗೊಳಿಸಿ 10 ಲಕ್ಷ ನಗದು, 700 ಗ್ರಾಂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ ಬನಶಂಕರಿಯ 2ನೇ ಹಂತದ 9ನೇ ಮುಖ್ಯ ರಸ್ತೆಯ ಬಿವಿಕೆ ಕ್ಲಬ್ನಲ್ಲಿ ಯುಗಾದಿಯ ದಿನವಾದ ಮಾ.31ರ ರಾತ್ರಿ ನಡೆದಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ದರೋಡೆಕೋರರಿಂದ ಹಲ್ಲೆಗೊಳಗಾದ ರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಬನಶಂಕರಿ ಪೊಲೀಸರು, ದರೋಡೆಕೋರರ ಗ್ಯಾಂಗ್ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದರು.
ಯುಗಾದಿ ಪ್ರಯುಕ್ತ ರಮೇಶ್ ಮಾ.31ರಂದು ಸ್ನೇಹಿತರಾದ ಮುರುಳಿ, ಉಮಾಶಂಕರ್, ತಿಮ್ಮಣ್ಣ, ಕಿರಣ್, ಪುಟ್ಟಸ್ವಾಮಿ, ಬಾಬು ರೆಡ್ಡಿ, ನಾಗರಾಜ್, ಆನಂದ್, ಬೆಟ್ಟೇಗೌಡ, ರವಿಕುಮಾರ್, ಶೇಖರ್ ಹಾಗೂ ಗುಂಡ ಅವರೊಂದಿಗೆ ಸೇರಿಕೊಂಡು ಬಿವಿಕೆ ಕ್ಲಬ್ಗೆ ತೆರಳಿ ಮದ್ಯ ಸೇವಿಸಿ, ಕ್ಲಬ್ನ 2ನೇ ಮಹಡಿಯ ರೂಮ್ನಲ್ಲಿ ಇಸ್ಟಿಟ್ ಆಡುತ್ತಿದ್ದರು.
ಸಂಜೆ ಸುಮಾರು 6 ಗಂಟೆಗೆ 6 ಮಂದಿ ಮುಸುಕುಧಾರಿಗಳು ಮಾರಕಾಸ್ತ್ರಗಳೊಂದಿಗೆ ರೂಮ್ಗೆ ನುಗ್ಗಿದ್ದು, ಯಾರಾದರೂ ಉಸಿರು ಬಿಟ್ಟರೆ ಇಲ್ಲ ಎನಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಬಳಿಕ ರಮೇಶ್ ಹಾಗೂ ಅವರ ಸ್ನೇಹಿತರಿಂದ 10 ಲಕ್ಷ ನಗದು ಹಾಗೂ 700 ಗ್ರಾಂ ಚಿನ್ನಾಭರಣ, ಮೊಬೈಲ್ ಪೋನ್ಗಳನ್ನು ದರೋಡೆ ಮಾಡಿದ್ದಾರೆ. ನಂತರ ಎಲ್ಲರ ಬಟ್ಟೆ ಬಿಚ್ಚಿಸಿಕೊಂಡು ವಿವಸ್ತ್ರಗೊಳಿಸಿ ರೂಮ್ನಲ್ಲಿ ಕೂಡಿ ಹಾಕಿ ನಗದು, ಚಿನ್ನಾಭರಣ, ಮೊಬೈಲ್ ಹಾಗೂ ಬಟ್ಟೆಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ರಮೇಶ್ ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ. ಜೂಜಾಡಲು ಅನುವು ಮಾಡಿಕೊಟ್ಟ ಕ್ಲಬ್ ಮೇಲೆ ಕೂಡ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಕ್ಲಬ್ ಹಾಗೂ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮರಾದ ದೃಶಾವಳಿಯನ್ನು ಪರಿಶೀಲನೆ ದರೋಡೆಕೋರರ ಗ್ಯಾಂಗ್ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಲೋಕೇಶ್ ಹೇಳಿದರು.




