ಧಾರವಾಡ: ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹಿರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024 ರಲ್ಲಿ 21 ರ ಅಡಿ ಕಲಂ 4 ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಮೇ 25ಕ್ಕೆ ಕರ್ನಾಟಕ ಸಂಘಟಕರ ಸಮಾವೇಶ
- ಬಿಜೆಪಿಗೆ ಅಭೂತಪೂರ್ವ ಗೆಲುವು, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ ಮೆಚ್ಚುಗೆ: ಡಾ.ಕೆ.ಸುಧಾಕರ್
- ಕರಡು ಪ್ರಕಟಣೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವ ಅವಧಿ ವಿಸ್ತರಣೆ
- ‘ಹಕ್ಕಿಹಾಡು’ ನೂತನ ರಂಗಪ್ರಯೋಗ, ರಂಗಾಸಕ್ತ ಸಹೃದಯರ ಮನಸೂರೆಗೊಳ್ಳುವಲ್ಲಿ ಯಶಸ್ವಿ
- ಕಪಿಲೇಶ್ವರ ಹೊಂಡದಲ್ಲಿ ದುರಂತ: ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು
ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನವನ್ನು ಬಳಸತಕ್ಕದ್ದಲ್ಲ. ಬಳಸಿದ್ದಲ್ಲಿ ಎರಡು ನೂರು ರೂಪಾಯಿಗಳವರೆಗೆ ಇದ್ದ ದಂಡ (ಜುಲ್ಮಾನೆಯ)ದ ಬದಲಾಗಿ ಒಂದು ಸಾವಿರ ರೂಪಾಯಿಗಳವರೆಗೆ ದಂಡ (ಜುಲ್ಮಾನೆ) ವನ್ನು ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
- ಮೇ 25ಕ್ಕೆ ಕರ್ನಾಟಕ ಸಂಘಟಕರ ಸಮಾವೇಶ
- ಬಿಜೆಪಿಗೆ ಅಭೂತಪೂರ್ವ ಗೆಲುವು, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ ಮೆಚ್ಚುಗೆ: ಡಾ.ಕೆ.ಸುಧಾಕರ್
- ಕರಡು ಪ್ರಕಟಣೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವ ಅವಧಿ ವಿಸ್ತರಣೆ
- ‘ಹಕ್ಕಿಹಾಡು’ ನೂತನ ರಂಗಪ್ರಯೋಗ, ರಂಗಾಸಕ್ತ ಸಹೃದಯರ ಮನಸೂರೆಗೊಳ್ಳುವಲ್ಲಿ ಯಶಸ್ವಿ
- ಕಪಿಲೇಶ್ವರ ಹೊಂಡದಲ್ಲಿ ದುರಂತ: ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು
ಈ ಕುರಿತು ಪ್ರಕಟಣೆ ನೀಡಿರುವ ಅವರು, 21 ಎ ರ ಆಡಿ ಕಲಂ 4ಎ (ಹುಕ್ಕಾ ಬಾರ್ ನಡೆಸುವುದಕ್ಕಾಗಿ ದಂಡನೆ) ಪ್ರರಕಣದ ಉಪಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಪ್ತಿಯು, ಒಂದು ವರ್ಷಕ್ಕೆ ಕಡಿಮೆಯಿಲ್ಲದ ಆದರೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಗೆ ಕಾರಗೃಹ ವಾಸ ಮತ್ತು 50 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿಲ್ಲದ ಆದರೆ 01 ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ (ಜುಲ್ಮಾನೆ) ವನ್ನು ವಿಧಿಸಲಾಗುತ್ತದೆ ಎಂದಿದ್ದಾರೆ.
24 ರ ಆಡಿ ಕಲಂ 6ಎ ರಲ್ಲಿ ತಿಳಿಸಿರುವಂತೆ, ಇಪ್ಪತ್ತೊಂದು ವರ್ಷಗಳಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಸಿಗರೇಟು ಅಥವಾ ಇತರೆ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ನಿಷೇಧವಿದೆ. ಯಾರೇ ವ್ಯಕ್ತಿಯು ಇಪ್ಪತ್ತೊಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೇ ವ್ಯಕ್ತಿಗೆ, ಯಾವುದೇ ಶಿಕ್ಷಣ ಸಂಸ್ಥೆಯ ಒಂದು ನೂರು ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ ಅಥವಾ ಬಿಡಿಯಾಗಿ ಅಥವಾ ಒಂಟಿ ಕಟ್ಟಿಯಾಗಿ ಸಿಗರೇಟು ಅಥವಾ ಯವುದೇ ಇತರ ತಂಬಾಕು ಉತ್ಪನ್ನದ ಮಾರಾಟ ಮಾಡತಕ್ಕದ್ದಲ್ಲ. ಮತ್ತು ಮಾರಾಟಕ್ಕೆ ಇಡತಕ್ಕದ್ದಲ್ಲ ಅಥವಾ ಮಾರಾಟಕ್ಕೆ ಅನುಮತಿ ನೀಡತಕ್ಕದ್ದಲ್ಲ. ಉಲ್ಲಂಘನೆಯಾದಲ್ಲಿ ಒಂದು ಸಾವಿರ ರೂ.ಪಾಯಿಗಳವರೆಗೆ ದಂಡ ವನ್ನು ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.



