ತೇಜಸ್ವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಾನ್ಯತೆ ರದ್ದು

1 year ago

ಧಾರವಾಡ: ಧಾರವಾಡ ನಗರದ ಅನುದಾನಿತ ತೇಜಸ್ವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಿಂದಕ್ಕೆ ಪಡೆದು, ಆದೇಶ ಹೋರಡಿಸಿದ್ದಾರೆ.

ತೇಜಸ್ವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ಮಕ್ಕಳು ಪ್ರವೇಶ ಪಡೆಯದಂತೆ ಹಾಗೂ ಈಗಿರುವ ಮಕ್ಕಳು ಬೇರೆ ಕಡೆಗೆ ಪ್ರವೇಶ ಪಡೆಯಲು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ.

ಒಂದು ವೇಳೆ ಈ ಶಾಲೆಯಲ್ಲಿ ಪ್ರವೇಶ ಪಡೆದಲ್ಲಿ ಅಥವಾ ಮಕ್ಕಳಿಗೆ ಅಲ್ಲಿಯೇ ಶಿಕ್ಷಣ ಮುಂದುವರಿಸಿದಲ್ಲಿ ಇಲಾಖೆಯು ಮುಂದಿನ ಆಗುಹೋಗುಗಳಿಗೆ ಜವಾಬ್ದದಾರಿಯಾಗಿರುವುದಿಲ್ಲ. ಸಂಬಂಧಪಟ್ಟ ಪಾಲಕರೇ ಜವಾಬ್ದಾರರು ಎಂದು ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply