ಮರಣ ಪರಿಹಾರ ವೈದ್ಯಕೀಯ ನೆರವು ಹಚ್ಚಳಕ್ಕೆ ಸ್ವಾಗತ
ಬೆಂಗಳೂರು: ಮಾನ್ಯ ಮುಖ್ಯಮಂತ್ರಿಯವರು ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಸ್ವಾಭಾವಿಕ ಮರಣ ಹೊಂದಿದಲ್ಲಿ ಪರಿಹಾರ ಧನವನ್ನು ಈಗಿರುವ ರೂ.75,000/- ದಿಂದ ರೂ. 1,50,000/- ಕ್ಕೆ, ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮರಣ ಹೊಂದಿದಲ್ಲಿ 5 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿರುವ ತೀರ್ಮಾನವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (CWFI) ಸ್ವಾಗತಿಸುತ್ತದೆ. ಅದೇ ಸಂದರ್ಭದಲ್ಲಿ ಹ್ರದ್ರೋಗ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಟಾಪ್ ಅಪ್ ರೂಪದಲ್ಲಿ ಹೆಚ್ಚಿಗೆ ಪರಿಹಾರ ನೀಡಿರುವುದು ಕೂಡಾ ಸ್ವೀಕಾರಾರ್ಹವಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಆದರೆ 6ನೇ ಕ್ಲಾಸಿನಿಂದ 12ನೇ ಕ್ಲಾಸಿನ ವರೆಗೆ ವಸತಿ ಶಾಲೆಗಳನ್ನು ಎಲ್ಲಾ 31 ಜಿಲ್ಲೆಗಳಲ್ಲಿ ಸ್ಥಾಪಿಸುವ ಹೆಸರಲ್ಲಿ ಕಲ್ಯಾಣ ಮಂಡಳಿ ನಿಧಿ 750 ಕೋಟಿ ರೂಪಾಯಿಗಳನ್ನು ಬಳಕೆ ಮಾಡಲಾಗುವುದು ಎನ್ನುವ ಪ್ರಸ್ತಾವವನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ರು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ತನ್ನ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.
ಈ ಪ್ರಸ್ತಾಪವು 1996 ಕಾಯಿದೆಗೆ ವಿರೋಧವಾಗಿದೆ. ಮಂಡಳಿ ಆರಂಭಗೊಂಡ ಕಾಲದಿಂದಲೂ ಭವ್ಯ ಸೌಧಗಳನ್ನು ನಿರ್ಮಿಸುವ ಕಾರ್ಮಿಕರಿಗೆ ಸ್ವತಃ ಅವರ ವಸತಿ ನಿರ್ಮಾಣಕ್ಕೆ 2ರಿಂದ 5 ಲಕ್ಷ ಸಹಾಯಧನ ಬೇಕೆಂದು ಕಾರ್ಮಿಕರು ಹೋರಾಡುತ್ತಿದ್ದಾರೆ. ಆದರೆ ಅದನ್ನು ನೀಡಲಿಲ್ಲ ಬದಲಾಗಿ ನಕಲಿ ಕಾರ್ಮಿಕರನ್ನು ಸೃಷ್ಟಿಸಿದ ಕೊಳಚೆ ನಿರ್ಮೂಲನಾ ಮಂಡಳಿಗೆ ರೂ 522 ಕೋಟಿ ಮಂಡಳಿ ನಿಧಿ ನೀಡಲಾಗಿದೆ. ಈಗ ಸಾಲದೆಂಬಂತೆ ರೂ 750 ಕೋಟಿ ಹಣದಲ್ಲಿ ವಸತಿ ಶಾಲೆ ನಿರ್ಮಿಸಲು ಹೊರಟಿದೆ. ಇದು ಕಾರ್ಮಿಕ ಸಚಿವರು ಹಾಗೂ ಅವರ ಹಿಂಭಾಲಕರು ಮತ್ತು ಅಧಿಕಾರಿಗಳ ಜೇಬು ತುಂಬಿಸುವ ಕಾರ್ಯಕ್ರವಲ್ಲದೆ ಬೇರೆನೂ ಅಲ್ಲ ಇದರಿಂದ ಬಡ ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಪ್ರಯೋಜನವಿಲ್ಲ.
ಈಗಾಗಲೇ ಇರುವ ಸರ್ಕಾರಿ ವಸತಿ ಶಾಲೆಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕೆಲಸವೇ ಹೊರತು ವಸತಿ ಶಾಲೆ ತೆರೆಯುವುದಲ್ಲ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು CWFI ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್ ಕಲ್ಯಾಣ ಮಂಡಳಿ ನಿಧಿ ದುರುಪಯೋಗ ವಾಗಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಎಜಿ ತನಿಖೆ ನಡೆಸಲು ಆದೇಶಿಸಿದೆ ಅಲ್ಲದೆ. 2021 ಅಧಿಸೂಚನೆ ಅನ್ವಯ ಶೈಕ್ಷಣಿಕ ಧನಸಹಾಯ ವಿತರಿಸಲು ತೀರ್ಪುನೀಡಿದೆ. ಅದನ್ನು ಒಳಗೊಂಡು ಇತರೆ ಘೋಷಿತ ಕಾರ್ಯಕ್ರಮಗಳನ್ನು ಮಂಡಳಿ ಸಂಪರ್ಕವಾಗಿ ಜಾರಿಗೊಳಿಸುವುದೇ ಕಾರ್ಮಿಕರಿಗೆ ನೀಡುವ ನ್ಯಾಯ ವಾಗಿದೆ.ಆದ್ದರಿಂದ ಬಜೆಟ್ ಪ್ರಸ್ತಾಪಿತ ವಸತಿ ಶಾಲೆ ನಿರ್ಮಾಣವನ್ನು ಕೈ ಬಿಡಬೇಕೆಂದು ಫೆಡರೇಷನ್ ಆಗ್ರಹಿಸಿದೆ.




