ದಲಿತರನ್ನು ಕಾಂಗ್ರೆಸ್ ಸಹಿಸಿಕೊಳ್ಳುವುದಿಲ್ಲ, ಒಪ್ಪುವುದಿಲ್ಲ: ಬಿಜೆಪಿ ಆರೋಪ

2 years ago

ಬೆಂಗಳೂರು: ದೇಶದಲ್ಲಿ ದಲಿತರನ್ನು ಕಾಂಗ್ರೆಸ್ ಸಹಿಸಿಕೊಳ್ಳುವುದಿಲ್ಲ, ಒಪ್ಪುವುದಿಲ್ಲ ಎನ್ನುವುದು ಅಂಬೇಡ್ಕರ್ ಅವರ ಕಾಲಘಟ್ಟದಿಂದಲೂ ಸಾಬೀತು ಆಗುತ್ತಲೇ ಇದೆ ಎಂದು ರಾಜ್ಯ ಬಿಜೆಪಿ ಹೇಳಿದೆ.

ಕಾರ್ಯಕ್ರಮ ಒಂದರಲ್ಲಿ ತೆಲಂಗಾಣ ಡಿಸಿಎಂ ಮಲ್ಲು ಬಟ್ಟಿ ವಿಕ್ರಾಮಾರ್ಕ ಅವರಿಗೆ ಸಮಾನವಾದ ಕುರ್ಚಿ ಇಲ್ಲದ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ, ತೆಲಂಗಾಣ ಸರ್ಕಾರದ ದಲಿತ ಉಪಮುಖ್ಯಮಂತ್ರಿ ಮಲ್ಲು ಬಟ್ಟಿ ವಿಕ್ರಾಮಾರ್ಕ ಅವರಿಗೆ ಭಾರೀ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ.

ಸಿಎಂ ರೇವಂತ್ ರೆಡ್ಡಿ ಅವರಿಂದ ಹಿಡಿದು ಇಡೀ ಸಚಿವ ಸಂಪುಟವೇ ಕುರ್ಚಿ ಮೇಲೆ ವಿರಾಜಮಾನರಾಗಿ ಕುಳಿತಿದ್ದರೆ, ಡಿಸಿಎಂ ದಲಿತರು ಎನ್ನುವ ಕಾರಣಕ್ಕೆ ಕೆಳಗೆ ಕೂರಿಸಲಾಗಿದೆ. ದೇಶದ ಮೂಲೆ ಮೂಲೆಯಲ್ಲೂ ದಲಿತರನ್ನು ಹತ್ತಿಕ್ಕುವ ಅಜೆಂಡಾವನ್ನು ಕಾಂಗ್ರೆಸ್ ಮುಂದುವರಿಸಿದೆ ಎಂದು ಹೇಳಿದೆ.

Leave a Reply