ಮೈಸೂರು: ವಿಧಾನಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಕರಿಯ ಮತ್ತು ಕುಳ್ಳ ಎಂಬ ಶಬ್ದಗಳು ಸಾಕಷ್ಟು ಸಂಚಲನ ಸೃಷ್ಟಿಸಿವೆ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ನನಗೆ ಅತ್ಯಂತ ಆಪ್ತರು. ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದು ಪ್ರೀತಿಯಿಂದ ಅವರನ್ನು ನಾನು ಕರಿಯ ಎನ್ನುತ್ತಿದ್ದೆ, ಅದಕ್ಕೆ ಪ್ರತಿಯಾಗಿ ಅವರು ನನಗೆ ಕುಳ್ಳ ಎನ್ನುತ್ತಿದ್ದರು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಈ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ಕರಿಯ ಮತ್ತು ಕುಳ್ಳ ಸಂಸ್ಕೃತಿ ನಮ್ಮದಲ್ಲ. ನಾನೆಂದಿಗೂ ಆ ರೀತಿ ಮಾತನಾಡಿಲ್ಲ. ಅವರಿಗೆ ದುಡ್ಡಿನ ಮದ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಚಾಮುಂಡಿ ತಾಯಿಯ ಮುಂದೆ ನಿಂತು ಹೇಳುತ್ತಿದ್ದೇನೆ. ಹಿರಿಯ ನಾಯಕ ಬಸವರಾಜ ಹೊರಟ್ಟಿ ಒಮ್ಮೆ ನನ್ನನ್ನು ಕುಮಾರ ಎಂದು ಕರೆದಾಗ ಜಮೀರ್ ಅಹ್ಮದ್ ಖಾನ್ ಅವರನ್ನು ಹೊಡೆಯಲು ಹೋಗಿದ್ದರು. ಅಂತಹ ಗಿರಾಕಿ ಈತ. ನಿಮಗೆ ಜಮೀರ್ ಅಹ್ಮದ್ ಖಾನ್ ಒಡೆಯಲು ಬಂದಿರಲಿಲ್ಲವೇ ಎಂದು ಹೊರಟ್ಟಿ ಅವರನ್ನು ಕೇಳಬಹುದು ಎಂದರು.
ರಾಜಕೀಯವಾಗಿ ನಾವಿಬ್ಬರೂ ಸ್ನೇಹಿತರಾಗಿ ಇದ್ದಿದ್ದು ನಿಜ. ಆದರೆ ಆ ಸ್ನೇಹ ಎಂದಿಗೂ ಕರಿಯ, ಕುಳ್ಳ ಎಂದು ಕರೆಯುವಷ್ಟರ ಮಟ್ಟಿಗೆ ಇರಲಿಲ್ಲ. ಕೇಂದ್ರ ಮಂತ್ರಿಯಾದವರ ಬಗ್ಗೆ ಇಂತಹ ಮಾತುಗಳನ್ನು ಹೇಳಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಗೆ ಸಹಿಸಿದ್ದಾರೆ? ಬೇರೆ ಯಾರಾದರೂ ಹೀಗೆ ಮಾತನಾಡಿದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಜೈಲಿಗೆ ತಳ್ಳುತ್ತಿದ್ದರು ಎಂದರು.




