ಬೆಂಗಳೂರು: ಹಿಂದೂ ಧರ್ಮ ರಕ್ಷಣೆಗಾಗಿ ದೇವರಿಂದಲೇ ಸೃಷ್ಟಿಯಾದವರಂತೆ ಆಡುವ ಬಿಜೆಪಿ ನಾಯಕರೇ ಸನಾತನ ಧರ್ಮ ರಕ್ಷಣೆ ಅಂದ್ರೆ ಇದೇನಾ? ನಿಮ್ಮ ದೇವರ ಮೇಲಿನ ಭಕ್ತಿ ಇಷ್ಟೇನಾ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
4 ವರ್ಷಗಳಿಂದ ಉತ್ತರಪ್ರದೇಶದಲ್ಲಿ ಸಿಎಂ ಆದಿತ್ಯನಾಥ್ ದೇವಾಲಯಗಳಿಗೆ ಹಣ ಬಿಡುಗಡೆ ಮಾಡದಿರುವ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, ಸ್ವಯಂಘೋಷಿತ ಸಂತ ಯೋಗಿ ಆದಿತ್ಯನಾಥ್ ಸರ್ಕಾರ ಬರೋಬ್ಬರಿ 4 ವರ್ಷಗಳಿಂದ ದೇಗುಲಗಳಿಗೆ ಬಿಡಿಗಾಸನ್ನೂ ಕೊಟ್ಟಿಲ್ಲವೆಂದು ಉತ್ತರ ಪ್ರದೇಶದ ದೇವಾಲಯಗಳು ಹಾಗೂ ಟ್ರಸ್ಟ್ ಗಳು ಹೈಕೋರ್ಟ್ಗೆ ಹೋಗಿರೋದನ್ನು ನೋಡಿದರೆ ಬಿಜೆಪಿಗರ ಹಿಂದುತ್ವ ಪ್ರೀತಿ ಎಷ್ಟಿದೆಯೆಂದು ತಿಳಿಯುತ್ತದೆ ಎಂದಿದ್ದಾರೆ.
ಬಿಜೆಪಿಯವರು ಅಬ್ಬರಿಸುವ ಹಿಂದುತ್ವ, ಹಿಂದೂ ಧರ್ಮ ರಕ್ಷಣೆ ಕೇವಲ ಚುನಾವಣಾ ದಾಳವಷ್ಟೆ. ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಹಿಂದುತ್ವದ ಹೆಸರಲ್ಲಿ ಬಿಜೆಪಿಯವರು ಬೀದಿಗಿಳಿಯುತ್ತಾರೆ, ದ್ವೇಷ ಬಿತ್ತುತ್ತಾರೆ ಎಂದಿದ್ದಾರೆ.
ಯೋಗಿ ಆದಿತ್ಯನಾಥ್ಗೆ ವೋಟ್ ತಂದುಕೊಡುವ ಅಯೋಧ್ಯೆ ರಾಮನ ಮೇಲಷ್ಟೇ ಭಕ್ತಿ ಹೊರತು ಚಿಕ್ಕ ಚಿಕ್ಕ ಗುಡಿಯಲ್ಲಿರುವ ದೇವರುಗಳ ಮೇಲಲ್ಲ. ಸ್ವಯಂಘೋಷಿತ ಸಂತ, ಸ್ವಯಂ ಘೋಷಿತ ವಿಶ್ವಗುರುವಿಗೆ ಈ ದೇಶದ ಜನ ಮರುಳಾಗುವ ಕಾಲ ಮುಗಿದಿದೆ. ಬಿಜೆಪಿಯವರ ನಾಟಕಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.



