ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗವಿಮಠದ ಬಾನಂಗಳದಲ್ಲಿ ಬಣ್ಣ-ಬಣ್ಣದ ಪತಂಗಗಳು ಹಾರಾಡಿ ಸಾರ್ವಜನಿಕರ ಗಮನ ಸೆಳೆದವು. 2025ರ ಗವಿಶ್ರೀ ಕ್ರೀಡಾ ಉತ್ಸವದ ಭಾಗವಾಗಿ ಶ್ರೀ ಗವಿಮಠ ಆವರಣದಲ್ಲಿ ಜರುಗಿದ ಬೃಹತ್ ಗಾತ್ರದ ಗಾಳಿಪಟಗಳ ಪ್ರದರ್ಶನದಲ್ಲಿ ಓಡಿಸ್ಸಾ, ಗುಜರಾಜ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ತಂಡಗಳು ಭಾಗವಹಿಸಿ, ಹುಲಿ, ಚಿರತೆ, ಕುದರೆ, ಮೀನು ಹಾಗೂ ಇತರೆ ಮಾದರಿಯ ವಿಭಿನ್ನ ಗಾಳಿಪಟಗಳನ್ನು ಹಾರಿಸಿ ಜನರ ಆಕಷಣೆಯನ್ನು ಸೆಳೆದವು. ಮಕ್ಕಳು ಹಾಗೂ ಸಾರ್ವಜನಿಕರು ರಂಗು ರಂಗಿನ ಗಾಳಿಪಟಗಳ ಹಾರಾಟವನ್ನು ನೋಡಿ ಚಪ್ಪಾಳೆ ತಟ್ಟಿ ಖುಷಿಪಟ್ಟರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಗಾಳಿಪಟಗಳ ಪ್ರದರ್ಶನ ಸ್ಥಳಕ್ಕೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಭೇಟಿ ನೀಡಿ, ಬಳಿಕ ಮಾತನಾಡಿ, ಗಾಳಿಪಟ ಉತ್ಸವವನ್ನು ಕೊಪ್ಪಳಕ್ಕೆ ಪರಿಚಯಿಸುವ ಉದ್ದೇಶದಿಂದ ಬೃಹತ್ ಗಾತ್ರದ ಗಾಳಿಪಟಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಗಾಳಿಪಟ ಪ್ರದರ್ಶನಗಳು ಹೆಚ್ಚಾಗಿ ಸಮುದ್ರ ತೀರದ ಪ್ರದೇಶಗಳಲ್ಲಿ ನಡೆಯುತ್ತದೆ. ಅಂತಹ ಉತ್ಸವಗಳಿಗೆ ಹೋಗಲಾಗದ ನಮ್ಮ ಗ್ರಾಮೀಣ ಭಾಗದ ಜನರಿಗೆ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟಗಳ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಪ್ರದರ್ಶನದಲ್ಲಿ ಗುಜರಾತ, ಓಡಿಸ್ಸಾ, ಕೇರಳ ಮತ್ತು ನಮ್ಮ ಕರ್ನಾಕಟ ರಾಜ್ಯದ ತಂಡಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರು ಸಹ ಪಾಲ್ಗೊಂಡಿದ್ದಾರೆ. ರಾತ್ರಿಯೂ ಸಹ ಎಲ್.ಇ.ಡಿ ಗಾಳಿಪಟಗಳ ಪ್ರದರ್ಶನವು ನಡೆಯಲಿದ್ದು, ಸಾರ್ವಜನಿಕರು ಇದನ್ನು ವೀಕ್ಷಿಸಿ ಆನಂದಿಸಬಹುದಾಗಿದೆ ಎಂದರು.
ಭಾರತದ ಕೈಟ್ ಮ್ಯಾನ್ ಎಂದೇ ಪ್ರಸಿದ್ದರಾದ ವಿ.ಕೃಷ್ಣಜಿ ರಾವ್ ಮಾತನಾಡಿ, ಗಾಳಿಪಟಗಳನ್ನು ಮೊದಲು ಬಿದಿರಿನ ಮೂಲಕ ತಯಾರಿಸಿ ಹಾರಿಸುತ್ತಿದ್ದೆವು. ಈಗ ವಿಭಿನ್ನ ರೂಪದ ಬಟ್ಟೆಗಳಲ್ಲಿ ಸಿದ್ದಪಡಿಸಿ ಹಾರಿಸಲಾಗುತ್ತಿದೆ. ಫೈಲೆಟ್ ಕೈಟ್, ಹುಲಿ, ಕುದರೆ, ಮೀನು, ಹಸು, ಆಮೆ ಹೀಗೆ ಹಲವಾರು ಬಗೆಯ ಗಾಳಿಪಟಗಳನ್ನು ಮಾಡಿ ಹಾರಿಸಲಾಗುತ್ತಿದೆ ಎಂದರು.
ಜಾತ್ರೆಯಲ್ಲಿ ಗಾಳಿಪಟ ಉತ್ಸವ ಹಮ್ಮಿಕೊಳ್ಳುವುದರಿಂದ ಹೆಚ್ಚಿನ ಜನರಿಗೆ ಮನರಂಜನೆ ಸಿಗುತ್ತದೆ. ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಾಳಿಪಟಗಳ ಪ್ರದರ್ಶನ ಹಮ್ಮಿಕೊಂಡಿರುವುದರಿಂದ ಜನ ತುಂಬಾ ಉತ್ಸಾಹದಿಂದ ಇವುಗಳ ವೀಕ್ಷಣೆ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ ಸೇರಿದಂತೆ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದ ಗಾಳಿಪಟಗಳನ್ನು ಹಾರಿಸುವ ತಂಡಗಳ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ದೈಹಿಕ ಶಿಕ್ಷಕರು, ವಿವಿಧ ಶಾಲಾ ಕಾಲೇಜುನ ಮಕ್ಕಳು ಸೇರಿದಂತೆ ಹಲವಾರು ಜನರು ಹಾಜರಿದ್ದರು.




