ಕಾಂಗ್ರೆಸ್ ಪಕ್ಷ ಬಡವರ ಬಗ್ಗೆ ಕೇವಲ ಮಾತನಾಡುವುದಿಲ್ಲ, ಕೆಲಸವನ್ನ ಮಾಡಿ ತೋರಿಸುತ್ತೇವೆ ಎನ್ನುವುದಕ್ಕೆ ಹುಬ್ಬಳ್ಳಿಯಲ್ಲಿ 42,000ಕ್ಕೂ ಹೆಚ್ಚು ಮನೆಗಳನ್ನ ಹಂಚಿಕೆ ಮಾಡಿದ ಕಾರ್ಯಕ್ರಮವೇ ಸಾಕ್ಷಿಯಾಗಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಪ್ರಧಾನ ಮಂತ್ರಿ ಅವಾಜ್ ಯೋಜನೆ ಅಡಿಯಲ್ಲಿ ಕೇವಲ 1,50,000 ಕೊಟ್ಟು ದೇಶದ ಎಲ್ಲರಿಗೂ ನಾನು ವಸತಿ ಕೊಟ್ಟೆನೆಂದು ವೇದಿಕೆಗಳ ಮೇಲೆ ಅಬ್ಬರಿಸಿ ಮಾತನಾಡುವಾಗ ಬಿಜೆಪಿಯವರಿಗೆ ಹುಬ್ಬಳ್ಳಿಯ ಕಾರ್ಯಕ್ರಮ ಸಹಿಸಿಕೊಳ್ಳಲಾಗದ ಕಾರ್ಯಕ್ರಮವಾಗಿದೆ.
ಕೇಂದ್ರ ಸರ್ಕಾರ ಒಂದುವರೆ ಲಕ್ಷ ರೂಪಾಯಿ ನೀಡಿದರೆ ರಾಜ್ಯ ಸರ್ಕಾರ ಸಾಮಾನ್ಯ ಜನರಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಎರಡು ಲಕ್ಷ ರೂಪಾಯಿಗಳನ್ನು ಈ ಮನೆಗಳಿಗೆ ನೀಡುತ್ತಿದ್ದರು ಕೊಟ್ಟು ಏಳು ಲಕ್ಷ ರೂಪಾಯಿಗಳ ಮೊತ್ತದ ಈ ಮನೆಗಳಿಗೆ ಫಲಾನುಭವಿಗಳು ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡು ಅದನ್ನು ತೀರಿಸಬೇಕಾಗಿತ್ತು.
ಬಡವರ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಸರ್ಕಾರ ಶ್ರೀ ಸಿದ್ದರಾಮಯ್ಯನವರು ಮತ್ತು ಡಿ ಕೆ ಶಿವಕುಮಾರ್ ಅವರು ಸಂಪುಟದಲ್ಲಿ ನಿರ್ಧಾರವನ್ನು ಮಾಡಿ ವಸತಿ ಸಚಿವರಾದ ಜಮೀರ್ ಅಹ್ಮದ್ ರವರ ಬಯಕೆಯಂತೆ ಬಡವರಿಗೆ ಕೊಡುವಂತಹ ಈ ಮನೆಗಳಿಗೆ ಸರ್ಕಾರವೇ ಸಂಪೂರ್ಣವಾಗಿ ಹಣವನ್ನು ಪಾವತಿಸಿ ಇದರ ಹೊರೆಯನ್ನು ಸರ್ಕಾರವೇ ಹೊತ್ತುಕೊಂಡು ಬಡವರಿಗೆ ಸೂರು ನೀಡಿದ್ದಾರೆ. ಈ ಹಿಂದೆ 33,000 ಮನೆಗಳನ್ನು ಮೊದಲ ಹಂತದಲ್ಲಿ ಇದೀಗ 42,000ಕ್ಕೂ ಹೆಚ್ಚು ಮನೆಗಳನ್ನು ಎರಡನೇ ಹಂತದಲ್ಲಿ ನೀಡುವುದರ ಮೂಲಕ ಕರ್ನಾಟಕದಲ್ಲಿ ವಸತಿ ಕ್ರಾಂತಿಯನ್ನು ಮಾಡಿರುತ್ತಾರೆ.
ಐದು ಗ್ಯಾರೆಂಟಿಗಳಿಗೆ ಪ್ರತಿ ವರ್ಷ ಸುಮಾರು 55,000 ಕೋಟಿ ರೂಪಾಯಿಗಳ ನೀಡಿ ಜೊತೆಗೆ ಬಡವರ ಈ ಮನೆಗಳಿಗೆ ಏಳು ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ನೀಡಿ ಬಡವರಿಗೆ ಮನೆಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ವಸತಿ ಸಚಿವರಾದ ಜಮೀರ್ ರವರಿಗೆ ಬಡವರ ಬಗ್ಗೆ ಕಾಳಜಿ ಇದೆಯೋ ಅಥವಾ ಧರ್ಮ ಧರ್ಮಗಳ ನಡುವೆ ಸಂಘರ್ಷದ ಮಾತುಗಳನ್ನ ಆಡುತ್ತಾ ಸದಾ ಅಬ್ಬರಿಸಿ ಮಾತನಾಡುವ ಬಿಜೆಪಿಯವರ ಮಾತುಗಳಲ್ಲಿ ಬಡವರ ಬಗ್ಗೆ ಬದ್ಧತೆ ಇದೆಯೋ ಎನ್ನುವುದನ್ನು ಜನರು ಆಲೋಚಿಸಬೇಕಾಗಿದೆ.
2013ರಿಂದ ಎರಡು ಸಾವಿರದ ಹದಿನೆಂಟರ ಅವಧಿಯಲ್ಲಿ ಸುಮಾರು 14 ಲಕ್ಷ ಮನೆಗಳನ್ನು ವಸತಿ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಿದ್ದ ನಮ್ಮ ಸರ್ಕಾರ ಈಗ 1,80,000 ಮನೆಗಳನ್ನು ಬಡವರಿಗೆ ನೀಡಲು ನಿರ್ಧರಿಸಿ ಹಂತ ಹಂತವಾಗಿ ಯೋಜನೆಗಳನ್ನ ಪೂರೈಸಿ ಈಗ ಸುಮಾರು 75,000 ಮನೆಗಳನ್ನು ಹಂಚುವುದರ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡು ಬಡವರ ಬದುಕಿಗೆ ಸೂರನ್ನು ನೀಡಿ ಸಿದ್ದರಾಮಯ್ಯನವರು ಸೂರಪ್ಪನಾಗಿದ್ದಾರೆ.
ಕೆಲಸ ಮಾಡುವ ವ್ಯಕ್ತಿ ಯಾವ ಧರ್ಮದವರಾದರೇನು ಮಾನವೀಯತೆಯಿಂದ ದುಡಿಯುವ ವ್ಯಕ್ತಿ ಯಾವ ಬಣ್ಣದವರಾದರೇನು ಎನ್ನುವುದಕ್ಕೆ ಜಮೀರ್ ಅಹ್ಮದ್ ರವರು ಕಾರಣರಾಗಿದ್ದಾರೆ. ಅವರು ತಮ್ಮ ಇಲಾಖೆಯನ್ನು ಅತ್ಯಂತ ಚುರುಕುತನದಿಂದ ನಿರ್ವಹಿಸುತ್ತಾ ಬಡವರ ವಿಚಾರದಲ್ಲಿ ಕಾಳಜಿಯಿಂದ ದುಡಿಯುತ್ತಿದ್ದಾರೆ. ಅದಕ್ಕಾಗಿ ಅವರಿಗೆ ವಿಶೇಷವಾದ ಕೃತಜ್ಞತೆಗಳು. ಜೊತೆಗೆ ಕೊಳಚೆ ಅಭಿವೃದ್ಧಿ ಮಂಡಳಿ ಎಂಬ ಒಂದು ಸಂಸ್ಥೆ ಇದೆ ಎನ್ನುವುದನ್ನು ಇದರ ಅಧ್ಯಕ್ಷರಾಗಿರುವ ಪ್ರಸಾದ್ ಅಬ್ಬಯ್ಯ ರವರು ತೋರಿಸಿಕೊಟ್ಟಿದ್ದಾರೆ. ಅವರಿಗೂ ಅಭಿನಂದನೆಗಳು.
– ಕೆ ಎಸ್ ನಾಗರಾಜ್, ಬೆಂಗಳೂರು






































