ಜಪ್ಪಿನಮೊಗರಿನಲ್ಲಿ 25ನೇ ವರ್ಷದ ಪುಸ್ತಕ ವಿತರಣೆ

11 months ago

ಮಂಗಳೂರು; “ಮೋಕ್ಷನಿಧಿ” ಜಪ್ಪಿನಮೊಗರು ಗ್ರಾಮ ಯುವಕ ಮಂಡಲ (ರಿ.) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(D.Y.FI) ಜಪ್ಪಿನಮೊಗ್ರು ಘಟಕ ಇದರ ಸಂಯುಕ್ತ ಆಶ್ರಯದಲ್ಲಿ 25ನೇ ವರ್ಷದ ಉಚಿತ ಪುಸ್ತಕ ವಿತರಣಾ ಲಯನ್ಸ್ ಕ್ಲಬ್ ಜಪ್ಪಿನಮೊಗರು ಸಭಾಂಗಣದಲ್ಲಿ ನಡೆಯಿತು.

ಉದಯಚಂದ್ರ ರೈ (ಅಧ್ಯಕ್ಷರು “ಮೋಕ್ಷನಿಧಿ” ಜಪ್ಪಿನಮೊಗರು) ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ DYFI ಮಂಗಳೂರು ನಗರ ಮುಖಂಡ ಚರಣ್ ಶೆಟ್ಟಿ ಶ್ರೀ ಪುರಂದರ ಜೆ. (ಶಿಕ್ಷಣ ಬೋಧಕರು ಅಂಗಡಿಮಾರು ಜಪ್ಪಿನಮೊಗರು), ಪ್ರಶಾಂತ್ ಶೆಟ್ಟಿ (ಉದ್ಯೋಗ ಅಧಿಕಾರಿ ಎ. ಜೆ.  ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್), ಜಯಂತಿ ಬಿ ಶೆಟ್ಟಿ  (ಮಾಜಿ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ), ಜಯಲಕ್ಷ್ಮಿ ಸಿ. ಕುಲಾಲ್ (ನಿರ್ದೇಶಕರು, ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಂಗಳೂರು), ದಿನೇಶ್ ಶೆಟ್ಟಿ (ಅಧ್ಯಕ್ಷರು ಜಪ್ಪಿನಮೊಗರು ಗ್ರಾಮ ಯುವಕ ಮಂಡಲ), ಹಾಗೂ ಜೆ.ಹನೀಫ್ (ಅಧ್ಯಕ್ಷರು D.Y.F.I ಜಪ್ಪಿನಮೊಗರು ಘಟಕ) ವೇದಿಕೆಯಲ್ಲಿ ಉಪಸ್ಥಿತರಿದ್ದರು.

160 ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ 2024-2025ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡವಾರು 90ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ 13 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಿವಾನ್ ಅಮೀನ್ ಸ್ವಾಗತಿಸಿದರು, ಮನೋಜ್ ಶೆಟ್ಟಿ  ಹಾಗೂ ಸ್ವಸ್ತಿಕ್ ಎಸ್ ಶೆಟ್ಟಿ ನಿರೂಪಿಸಿದರು ಹಾಗೂ ಗಗನ್ ಪೂಜಾರಿ ವಂದನಾರ್ಪಣೆ ಮಾಡಿದರು.

Leave a Reply