ಬೆಂಗಳೂರು: ₹64 ಕೋಟಿ ಬೆಲೆ ಬಾಳುವ ಭೂಮಿಯನ್ನು ಅನಧಿಕೃತ ದಾಖಲೆಯೊಂದಿಗೆ ಶ್ರೀಮತಿ ಹೆಸರಿನಲ್ಲಿ ಹೊಂದಿರುವ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದಕ್ಕಿಂತಲೂ ಪುರಾವೆ ಬೇಕೇ ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಬಿಜೆಪಿ, ನಿಮ್ಮ ಪತ್ನಿಯ ಅನಧಿಕೃತ ಜಮೀನಿಗೆ ಅಷ್ಟೊಂದು ಬೆಲೆ ಇದ್ದರೇ ಇಂದು ಪಾಪ ಮೂಲ ಜಮೀನಿನ ಮಾಲೀಕ ಸೋರುವ ಮನೆಯಲ್ಲಿ ಏಕೆ ವಾಸ ಮಾಡುತ್ತಿದ್ದರು ಉತ್ತರ ನೀಡಬಲ್ಲಿರಾ ಮುಖ್ಯಮಂತ್ರಿಗಳೇ? ಎಂದು ಕೇಳಿದೆ.
ಮುಖ್ಯಮಂತ್ರಿಯಾಗಿ ವಾಲ್ಮೀಕಿ ನಿಗಮದ ಹಗರಣ ನಮಗೆ ಸಂಬಂಧವೇ ಇಲ್ಲ ಎಂದು ಭಂಡತನದ ವಾದ ಮಾಡುವ ನಿಮಗೆ, ನಿಮ್ಮದೆ ಭ್ರಷ್ಟಾಚಾರದ ಬಗ್ಗೆ ತಪ್ಪಿಸಿಕೊಳ್ಳಲು ದಾಖಲೆ ಬಿಡುಗಡೆ ಮಾಡಿದ RTI ಕಾರ್ಯಕರ್ತನ ಮೇಲೆ ವಾಮಮಾರ್ಗವನ್ನು ಹಿಡಿದಿರುವುದಾದರೂ ಏಕೆ? ಎಂದಿದೆ.
ಉತ್ತರ ಕೊಡಿ ಅದಕ್ಕೂ ಮೊದಲು ರಾಜೀನಾಮೆ ಕೊಡಿ!!! ಎಂದು ಒತ್ತಾಯಿಸಿದೆ.



