ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂತು ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಹೀಗೆ ಹೇಳುವಾಗ ಅವರಾಗಲೀ, ಅವರ RSS ಸಂಸ್ಥೆಯಾಗಲೀ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ ಎಂಬುದನ್ನು ನಾನು ಅವರ ಗಮನಕ್ಕೆ ತರಲು ಇಚ್ಛಿಸುತ್ತೇನೆ.
ಬ್ರಿಟಿಷರ ವಸಾಹತುಶಾಹಿ ನೀತಿಯ ಎದುರು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರ ತ್ಯಾಗ ಮತ್ತು ಬಲಿದಾನದಿಂದಾಗಿಯೇ ನಮ್ಮ ದೇಶ ಸ್ವತಂತ್ರ ಹೊಂದಿತು.
ಇನ್ನು ನಂತರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತವರ ಸಂವಿಧಾನ ಬಂದ ಬಳಿಕ ಈ ನೆಲದ ಮೂಲ ನಿವಾಸಿಗಳಿಗೆ ಸಾಮಾಜಿಕ ಸ್ವಾತಂತ್ರ್ಯದ ಪರ್ವ ಆರಂಭಗೊಂಡಿತು.
ಈ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ತಂದು ಕೊಡುವಲ್ಲಿ ಸಂವಿಧಾನದ ಪಾತ್ರ ಅತ್ಯಂತ ದೊಡ್ಡದಾಗಿದ್ದು ಇದಕ್ಕಾಗಿ ನಾವು ಅಂಬೇಡ್ಕರ್ ಅಂತಹ ಮಹನೀಯರಿಗೆ ಋಣಿಯಾಗಿರಬೇಕೇ ವಿನಃ ಬಾಲ ರಾಮನಿಗಲ್ಲ.
ಲೋಕಸಭೆ ಚುನಾವಣೆಗಾಗಿ ಅಪೂರ್ಣಗೊಂಡಿದ್ದ ರಾಮ ಮಂದಿರವನ್ನು ಉದ್ಘಾಟಿಸುವ ಕೆಲಸ ಮಾಡಿದ್ದ ಬಿಜೆಪಿಗರು, ತಮಗೆ ಚುನಾವಣೆ ಮುಖ್ಯವೇ ಹೊರತು, ಯಾವ ರಾಮನಲ್ಲ ಎಂಬ ಸಂಗತಿಯನ್ನು ದೇಶಕ್ಕೇ ಸಾರಿ ಹೇಳಿದರು.
ಅದಕ್ಕಿಂತ ಮುಖ್ಯವಾಗಿ ಈ ದೇಶದ ಮೂಲೆ ಮೂಲೆಗಳಲ್ಲಿ ರಾಮ ಮಂದಿರ ಇದೆ, ಮಸೀದಿ, ಚರ್ಚು, ಇಗರ್ಜಿ ಎಲ್ಲವೂ ಇದೆ.
ಆದರೆ ಕರೋನಾ ಸಮಯ ಬಂದಾಗ ಇವೆಲ್ಲವೂ ಕೂಡಾ ಭದ್ರವಾಗಿ ಬಾಗಿಲನ್ನು ಹಾಕಿಕೊಂಡಿದ್ದವು ಎಂಬುದನ್ನು ನಾವ್ಯಾರು ಮರೆಯಬಾರದು.
ಆಗ ಬಡವರಿಗೆ, ಶ್ರಮಿಕರಿಗೆ ನೆರವಾಗಿದ್ದು ಯುಪಿಎ ಕಾಲದ ಮನ್ ರೇಗಾ ಮತ್ತು ಕಾಂಗ್ರೆಸ್ ಸರ್ಕಾರ ನೀಡಿದ ಅನ್ನಭಾಗ್ಯವೇ ವಿನಃ ಯಾವ ರಾಮಮಂದಿರವೂ ಅಲ್ಲ, ಬಾಲ ರಾಮನೂ ಅಲ್ಲ!
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




