ಬೆಂಗಳೂರು: ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ವಿರುದ್ಧ ಹಲವು ಆರೋಪಗಳನ್ನು ಮಾಡಿರುವ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿಗೆ ಪ್ರಕರಣದ ವಿಚಾರಣೆಯನ್ನು ಮೂರು ದಿನಗಳವರೆಗೆ ಮುಂದೂಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮನವಿ ಮಾಡಿದೆ.
ಎಸಿಬಿ ಮುಖ್ಯಸ್ಥರ ವಿರುದ್ಧ ಆದೇಶ ನೀಡಿದ್ದಕ್ಕಾಗಿ ಹಾಲಿ ನ್ಯಾಯಾಧೀಶರಿಂದ ವರ್ಗಾವಣೆ ಬೆದರಿಕೆ ಇದೆ ಎಂದು ನ್ಯಾಯಮೂರ್ತಿ ಸಂದೇಶ್ ಅವರು ಹೇಳಿದ್ದು, ನಿನ್ನೆ ನೀಡಿದ ಆದೇಶವನ್ನು ಇನ್ನೂ ಅಪ್ಲೋಡ್ ಮಾಡದ ಕಾರಣ ಭಾರತದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಈ ಮನವಿ ಮಾಡಿದೆ ಎಂದು ವರದಿಯಾಗಿದೆ.
ಜುಲೈ 11 ರಂದು ನೀಡಲಾದ ಆದೇಶವನ್ನು ಪರಿಶೀಲಿಸಲು ನಮಗೆ ಅನುವು ಮಾಡಿಕೊಡಲು ವಿಚಾರಣೆಯನ್ನು ಮೂರು ದಿನ ಮುಂದೂಡಲು ನಾವು ನ್ಯಾಯಾಧೀಶರನ್ನು ವಿನಂತಿಸುತ್ತೇವೆ. ಶುಕ್ರವಾರ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಿ ಎಂದು ಪೀಠವು ಆದೇಶಿಸಿದೆ.
ಸಿಜೆಐ ಎನ್ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿಯವರನ್ನೊಳಗೊಂಡ ಪೀಠ ನ್ಯಾಯಮೂರ್ತಿ ಸಂದೇಶ್ ಅವರ ನಿರ್ದಿಷ್ಟ ಅವಲೋಕನಗಳ ವಿರುದ್ಧ ಕರ್ನಾಟಕದ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಅದರ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ಎಡಿಜಿಪಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸುತ್ತಿದೆ.
ಎಸಿಬಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ ಬಳಿಕ ತಮಗೆ ವರ್ಗಾವಣೆಯ ಪರೋಕ್ಷ ಬೆದರಿಕೆಗಳು ಬಂದಿವೆ ಎಂದು ನ್ಯಾ. ಎಚ್.ಪಿ.ಸಂದೇಶ್ ಅವರು ಕಳೆದ ವಾರ ತೆರೆದ ನ್ಯಾಯಾಲಯದಲ್ಲಿ ಹೇಳಿಕೆ ನೀಡಿ ಅಚ್ಚರಿಗೆ ಕಾರಣರಾಗಿದ್ದರು. ಬಳಿಕ ಎಸಿಬಿ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿವಾದದ ಕೇಂದ್ರಬಿಂದುರವಾಗಿದ್ದರು. ನಿನ್ನೆ ನ್ಯಾಯಮೂರ್ತಿ ಸಂದೇಶ್ ಅವರು ಎಸಿಬಿ ತನಿಖೆಯ ಮೇಲ್ವಿಚಾರಣೆಗಾಗಿ ಬಂದಿರುವ ವರ್ಗಾವಣೆ ಬೆದರಿಕೆಯನ್ನು ಲಿಖಿತ ಆದೇಶದಲ್ಲಿ ದಾಖಲಿಸಿದ್ದರು ಎಂದು ವರದಿಯಾಗಿತ್ತು.



