ಅಮಿತ್ ಶಾ ಭೇಟಿಗೆ ದೆಹಲಿಗೆ ತೆರಳಲಿದ್ದಾರೆ ಕೆ.ಎಸ್.ಈಶ್ವರಪ್ಪ

2 years ago

ದೂರವಾಣಿ ಮೂಲಕ ಸಂಧಾನ ನಡೆಸಿದ ಗೃಹಸಚಿವ

ಬೆಂಗಳೂರು: ಬೆಂಗಳೂರು ಭೇಟಿ ನಡುವೆಯೇ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ ಅಮಿತ್ ಶಾ, ಕೆ.ಎಸ್.ಈಶ್ವರಪ್ಪ ಅವರ ಅಹವಾಲು ಆಲಿಸಿ, ಈ ಕುರಿತು ಹೆಚ್ಚಿನ ಮಾತುಕತೆಗಾಗಿ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.

ಇದಕ್ಕೆ ಒಪ್ಪಿದ ಈಶ್ವರಪ್ಪ ದೆಹಲಿಗೆ ಬರುತ್ತೇನೆ. ಆದರೆ ಪಕ್ಷವನ್ನು ಕುಟುಂಬದ ಮುಷ್ಟಿಯಿಂದ ಪಾರು ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ನಾನು ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ ನಾನು ಸ್ಪರ್ಧೆ ಮಾಡುವ ನಿರ್ಧಾರ ಅಚಲ ಎಂದರು.

ಅದಕ್ಕೆ ಅವರು ಎಲ್ಲವನ್ನೂ ಸುದೀರ್ಘವಾಗಿ ಮಾತನಾಡೋಣ ನಾಳೆ ದೆಹಲಿಗೆ ಬನ್ನಿ ಎಂದು ಬಂಡಾಯ ನಾಯಕ ಈಶ್ವರಪ್ಪ ಅವರಿಗೆ ಕರೆನೀಡಿದ್ದಾರೆ.

Leave a Reply