ಬೆಂಗಳೂರು: ಆರ್ಥಿಕ ತಜ್ಞ ಡಾ ಮನಮೋಹನ್ ಸಿಂಗ್ ಅವರು ಜಾರಿಗೆ ತರಲು ಬಯಸಿದ್ದ GST ಎಂಬ ಜನಪರವಾದ ತೆರಿಗೆ ವ್ಯವಸ್ಥೆಯನ್ನು, ಸಂಪೂರ್ಣ ಹಾಳು ಮಾಡಿರುವ ಬಿಜೆಪಿಗರು, ಮನಮೋಹನ್ ಸಿಂಗ್ ಅವರು ಹೇಳಿದ GST ಎಂಬ ಹೆಸರನ್ನು ಮಾತ್ರ ಇಟ್ಟುಕೊಂಡು ಅದರೊಳಗೆ ಇದ್ದ ಜನಪರ ತೆರಿಗೆ ವ್ಯವಸ್ಥೆಯನ್ನು ಗಾಳಿಗೆ ತೂರಿದ್ದು ಜನರನ್ನು ಅಕ್ಷರಶಃ ಲೂಟಿ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಹಳೆಯ ಕಾರುಗಳ ಮಾರಾಟದ ಮೇಲೆ ಕೇಂದ್ರ ಸರ್ಕಾರ 18% ಜಿ ಎಸ್ ಟಿ ವಿಧಿಸಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, GST ಎಂಬ ಶೋಷಣಾ ತೆರಿಗೆಯ ವ್ಯವಸ್ಥೆಯ ವಿರುದ್ಧ ವಿಪಕ್ಷಗಳು ದೊಡ್ಡ ಮಟ್ಟದಲ್ಲಿ ದನಿ ಮಾಡಿದರೆ, ಈ ಲೂಟಿಕೋರ ತೆರಿಗೆ ಪದ್ಧತಿಯಿಂದ ಬಹುಜನರನ್ನು ಕಾಪಾಡಿದಂತಹ ಕೆಲಸ ವಿಪಕ್ಷಗಳದ್ದಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆರಿಗೆ ಪದ್ದತಿಯು ಜನಸ್ನೇಹಿ ಆಗಿರಬೇಕೇ ವಿನಃ, ಅವರಿಗೆ ತೊಂದರೆದಾಯಕ ಆಗಿರಬಾರದು. ಈ ಹಿನ್ನಲೆಯಲ್ಲಿ ಈ ಕೆಟ್ಟ ತೆರಿಗೆ ವ್ಯವಸ್ಥೆಯ ವಿರುದ್ಧ ಜನಾಂದೋಲನ ರೂಪಿಸುವುದು ಅನಿವಾರ್ಯ ಎನಿಸುವ ಕಾಲ ಹತ್ತಿರ ಆಗುತ್ತಿದೆ ಎಂದಿದ್ದಾರೆ.




