ನಾಯಕತ್ವ ವಿಚಾರದ ಗೊಂದಲಗಳನ್ನು ಹೈಕಮಾಂಡ್ ಕೂಡಲೇ ಬಗೆಹರಿಸಬೇಕು: ಜಿ ಪರಮೇಶ್ವರ್

4 months ago

ಬೆಂಗಳೂರು: ನಾಯಕತ್ವ ವಿಚಾರವಾಗಿ ಉಂಟಾಗಿರುವ ಗೊಂದಲಗಳನ್ನು ಹೈಕಮಾಂಡ್ ಕೂಡಲೇ ಬಗೆಹರಿಸಬೇಕು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೇನು ಬಜೆಟ್ ಸಿದ್ಧತೆ ಸಭೆಗಳನ್ನು ನಡೆಸಲಿದ್ದಾರೆ. ಗೊಂದಲಗಳನ್ನು ಇಟ್ಟುಕೊಂಡು ಬಜೆಟ್ ತಯಾರಿ ಮಾಡಲು ಆಗುವುದಿಲ್ಲ. ಹೀಗಾಗಿ ಹೈಕಮಾಂಡ್ ಬಜೆಟ್ ಸಿದ್ಧತಾ ಸಭೆಗಳು ಆರಂಭವಾಗುವ ಮುನ್ನವೇ ಈ ಗೊಂದಲಗಳಿಗೆ ಬ್ರೇಕ್ ಹಾಕಬೇಕು ಎಂದು ತಿಳಿಸಿದರು.

ವಾಡಿಕೆಯಂತೆ ಮುಂಬರುವ ಫೆಬ್ರವರಿಯಲ್ಲಿ ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಯಾರಾದರೂ ಒಬ್ಬರು ಬಜೆಟ್ ಮಂಡಿಸಲೇಬೇಕು. ಹೀಗಾಗಿ ಹೈಕಮಾಂಡ್ ಎಲ್ಲ ಗೊಂದಲಗಳನ್ನು ಬಗೆಹರಿಸಬೇಕು ಎಂದು ತಿಳಿಸಿದರು.

ದೆಹಲಿಯಲ್ಲಿ ಕೆಲವರು ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂದು ಘೋಷಣೆ ಕೂಗಿದ್ದಾರೆ. ಇದು ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿ. ಇದಕ್ಕೆ ನಾನು ಏನನ್ನು ಹೇಳುವುದಿಲ್ಲ ಎಂದರು.

Leave a Reply