ಅರಣ್ಯ ಇಲಾಖೆ: ಮರ ಮತ್ತು ಟೊಂಗೆಗಳ ಬಹಿರಂಗ ಹರಾಜು

2 years ago

ಧಾರವಾಡ: ಧಾರವಾಡ ಶಹರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಛೇರಿ ಆವರಣದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ ಇರುವ 75 ಮರಗಳು ಮತ್ತು 46 ಟೊಂಗೆಗಳನ್ನು ವಲಯ ಅರಣ್ಯ ಅಧಿಕಾರಿ ಹುಬ್ಬಳ್ಳಿರವರ ಕಛೇರಿಯಲ್ಲಿ ಮಾರ್ಚ್ 28 ಮತ್ತು ಏಪ್ರಿಲ್ 3, 2024 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಕರೆಯಲಾಗಿದೆ.

ಈ ಕುರಿತು ತಕರಾರು ಸಲ್ಲಿಸಬಯಸುವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ ಉಪ ವಿಭಾಗ ಧಾರವಾಡ ಹಾಗೂ ಮರ ಅಧಿಕಾರಿಯವರು, ಅರಣ್ಯ ಸಂಕೀರ್ಣ, ಕೆ.ಸಿ.ಪಾರ್ಕ ಎದುರು ಧಾರವಾಡ ಇವರ ಕಛೇರಿಯಲ್ಲಿ ಲಿಖಿತ ರೂಪದಲ್ಲಿ ಮಾರ್ಚ್ 27, 2024 ರೊಳಗಾಗಿ ಸಲ್ಲಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply