ಫರ್ಹತುಲ್ಲಾ ಘೋರಿ ರಾಮೇಶ್ವರಂ ಕೆಫೆ ಸ್ಪೋಟದ ರೂವಾರಿ

2 years ago

ಬೆಂಗಳೂರು: ರಾಜಧಾನಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಬೆನ್ನು ಹತ್ತಿರುವ ಎನ್ಐಎ ಪೋಲಿಸ್ ತಂಡಕ್ಕೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸದ್ಯ ಪಾಕಿಸ್ತಾನದಲ್ಲಿ ತಲೆಮರಸಿಕೊಂಡಿರುವ ಅಂತರರಾಷ್ಟ್ರೀಯ ಭಯೋತ್ಪಾದಕ ಫರ್ಹತುಲ್ಲಾ ಘೋರಿ ರಾಮೇಶ್ವರಂ ಕೆಫೆ ಸ್ಪೋಟದ ರೂವಾರಿ ಎಂಬ ಅಂಶ ಬಹಿರಂಗವಾಗಿದೆ. 

ಭಯೋತ್ಪಾದಕ ಫರ್ಹತುಲ್ಲಾ ಘೋರಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲದೊಂದಿಗೆ ಸ್ಲೀಪರ್ ಸೆಲ್ ಮೂಲಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವನ್ನು ಆಯೋಜಿಸಿದ್ದಾನೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಉಗ್ರ ಭಾರತದಲ್ಲಿನ ಸ್ಲೀಪರ್ ಸೆಲ್ ಗಳ ಮೂಲಕ ಹಲವೆಡೆ ವಿಧ್ವಂಸಕ ಕೃತ್ಯ ನಡೆಸಲು ರೂಪಿಸಿರುವ ಅಂಶ ಕೂಡ ಬೆಳಕಿಗೆ ಬಂದಿದೆ. ಭಯೋತ್ಪಾದಕ ಫರ್ಹತುಲ್ಲಾ ಘೋರಿ ಕುಕ್ಕರ್ ಬಾಂಬ್ ತಯಾರಿಕೆಯಲ್ಲಿ ಪರಿಣಿತನಾಗಿದ್ದು, ಸ್ಲೀಪರ್ ಸೆಲ್ ಉಗ್ರರಿಗೆ ಈ ಬಾಂಬ್ ತಯಾರಿಕೆಯ ತರಬೇತಿ ನೀಡುತ್ತಿದ್ದಾನೆ ಎನ್ನಲಾಗಿದೆ.

ಅಲ್ಲದೆ ಸ್ಲೀಪರ್ ಸೆಲ್ ಗಳನ್ನು ಬಳಸಿಕೊಂಡು ದೇಶದ ಹಲವು ರೈಲು ನಿಲ್ದಾಣಗಳಲ್ಲಿ ದಾಳಿ ನಡೆಸಲು ಪಿತೂರಿ ಮಾಡಿದ್ದ ಎಂಬ ಅಂಶವನ್ನು ಬಂಧಿತ ಉಗ್ರ ತನಿಖಾ ತಂಡದ ಮುಂದೆ ಬಾಯಿಬಿಟ್ಟಿರುವುದಾಗಿ ಗೊತ್ತಾಗಿದೆ.

Leave a Reply