ವಿದ್ಯಾರ್ಥಿನಿಯನ್ನು ರಕ್ಷಿಸಿದ ಡಾ.ನಾಗಲಕ್ಷ್ಮಿ ಚೌದರಿ ಸಮಯಪ್ರಜ್ಞೆ

2 years ago

ಬೆಂಗಳೂರು: ದಿನಾಂಕ 08.03.2024ರಂದು ಬೆಂಗಳೂರು ನಗರದ ಬಿಕಾಂ ವಿದ್ಯಾರ್ಥಿನಿಯೊಬ್ಬಳು ತಮ್ಮ ಮನೆ ಪಕ್ಕದ ವ್ಯಕ್ತಿ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿ, ಮಾನಹಾನಿ ಉಂಟುಮಾಡಿ, ಜೀವಬೆದರಿಕೆ ಹಾಕಿದ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆಯಾದ ಡಾ.ನಾಗಲಕ್ಷ್ಮಿ ಚೌದರಿಯವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಕೂಡಲೇ ನೆರವು ಒದಗಿಸಲು ಕೋರಿಕೊಂಡಿದ್ದರು.

ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ನಾಗಲಕ್ಷ್ಮಿ ಚೌಧರಿಯವರು ಕೂಡಲೇ ಈ ದೂರನ್ನು ಸಂಬಂಧಪಟ್ಟ ಡಿಸಿಪಿ (ಪಶ್ಚಿಮ ವಿಭಾಗ) ಅವರಿಗೆ ರವಾನಿಸಿ, ತತಕ್ಷಣ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಅದರ ಪ್ರಕಾರ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕಿರುಕುಳ ಕೊಟ್ಟ ವ್ಯಕ್ತಿ ಮತ್ತು ಆತನ ಸ್ನೇಹಿತರ ವಿರುದ್ಧ ಎಫ್.ಐ.ಆರ್ ದಾಖಲಿಸಿ 1ನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಕರ್ನಾಟಕ ರಾಜ್ಯ ಮಹಿಳಾ ಆಯೋಗ ನೊಂದ ವಿದ್ಯಾರ್ಥಿನಿಗೆ ಘಟನೆ ನಡೆದ ಕೇವಲ 2 ಗಂಟೆಯಲ್ಲಿ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ತಮ್ಮನ್ನು ಕಷ್ಟಕರ ಪರಿಸ್ಥಿತಿಯಿಂದ ರಕ್ಷಿಸಿದ ಮಹಿಳಾ ಆಯೋಗ ಮತ್ತು ನಾಗಲಕ್ಷ್ಮಿ ಚೌದರಿಯವರಿಗೆ ಬಾಲಕಿ ಧನ್ಯವಾದಗಳನ್ನು ಅರ್ಪಿಸಿದ್ದಾಳೆ.

Leave a Reply