ದೆಹಲಿ: ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ತನಿಖಾ ಶ್ರೇಷ್ಠತೆಯ ಪದಕ ದೊರೆತಿದೆ. ಕೇಂದ್ರ ಗೃಹ ಸಚಿವಾಲಯದಿಂದ ಉತ್ತಮ ತನಿಖಾ ಶ್ರೇಷ್ಠ ಪ್ರಶಸ್ತಿ ಪ್ರಕಟವಾಗಿದ್ದು, 2021ನೇ ಸಾಲಿನಲ್ಲಿ 152 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ
- ಪರಮೇಶ್ ಅನಂತ್ ಹೆಗ್ಡೆ, ಡಿವೈಎಸ್ಪಿ, ಮಂಗಳೂರು ವಿಭಾಗ
- ಹೆಚ್.ಎನ್.ಧರ್ಮೇಂದ್ರ, ಎಸಿಪಿ, ಸಿಸಿಬಿ, ಬೆಂಗಳೂರು
- ಬಾಲಕೃಷ್ಣ.ಸಿ, ಡಿವೈಎಸ್ಪಿ, ಎಸ್.ಟಿ.ಎಫ್, ಬಿಡಿಎ, ಬೆಂಗಳೂರು
- ಮನೋಜ್ ಎನ್ ಹೊವಳೆ, ಪೊಲೀಸ್ ಇನ್ಸ್ ಪೆಕ್ಟರ್, ಬೆಂಗಳೂರು
- ದೇವರಾಜ್ ಟಿ.ವಿ., ಸರ್ಕಲ್ ಇನ್ಸ್ ಪೆಕ್ಟರ್, ದಾವಣಗೆರೆ
- ಶಿವಪ್ಪ ಸಟ್ಟೆಪ್ಪ ಕಮಟಗಿ, ಪೊಲೀಸ್ ಇನ್ಸ್ ಪೆಕ್ಟರ್, ಹುಬ್ಬಳ್ಳಿ
ಈ ಪ್ರಶಸ್ತಿಯನ್ನು ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ ಉತ್ತೇಜಿಸುವ ಸಲುವಾಗಿ ನೀಡಲಾಗುತ್ತಿದೆ. 2018ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು, ಶ್ರೇಷ್ಠ ವೃತ್ತಿಪರತೆ ಹೊಂದಿರುವ ಅಧಿಕಾರಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಕೊಡಮಾಡಲಾಗುತ್ತಿದೆ.



