ಹೈಕಮಾಂಡ್ ಮೊರೆ ಹೋದ ಬಿಜೆಪಿ

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಪಣತೊಟ್ಟಿರುವ ಬಿಜೆಪಿ ಗೆಲ್ಲುವ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ ಸಾಮಾಜಿಕ ನ್ಯಾಯದ ಜೊತೆಗೆ ಗೆಲುವು ಪ್ರಮುಖ ಅರ್ಹತೆ ಎಂದು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ ರಾಜ್ಯ ಕೋರ್ ಕಮಿಟಿ ಕೇಂದ್ರ ಸಮಿತಿಯ ಸೂಚನೆ ಮೇರೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ದೇಶದಲ್ಲಿ ವಿನೂತನ ಮಾದರಿ ಅನುಸರಿಸಿದೆ.

ಇದೀಗ ಬಿಜೆಪಿ ಮೊದಲ ಹಂತದ 161 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೇಂದ್ರ ಚುನಾವಣಾ ಸಮಿತಿಗೆ  ರವಾನಿಸಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹೊರವಲಯದ ರೆಸಾರ್ಟ್‍ನಲ್ಲಿ ಸಭೆ ನಡೆಸಿದ ಕೋರ್ ಕಮಿಟಿ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಂಡಿರುವ ಮೊದಲ ಹಂತದ ಪಟ್ಟಿಯನ್ನು ಹೈಕಮಾಂಡ್ಗೆ ರವಾನಿಸಿದ್ದು ಕೇಂದ್ರ ಚುನಾವಣಾ ಸಮಿತಿ ಇದೆ ಏಳರಂದು ಸಭೆ ನಡೆಸಲಿದ್ದು ಏಪ್ರಿಲ್ 8ರಂದು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.

ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಮೂವರು ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಟ್ಟಿರುವ ರಾಜ್ಯ ಘಟಕ ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯನ್ನು ಕೇಂದ್ರ ವರಿಷ್ಠರ ಹೆಗಲಿಗೆ ನೀಡಿದೆ.

ನಾವು ಹೆಸರುಗಳನ್ನು ಮಾತ್ರ ಶಿಫಾರಸ್ಸು ಮಾಡುತ್ತೇವೆ. ಅಂತಿಮವಾಗಿ ಯಾರನ್ನು ಎಲ್ಲಿಗೆ ಕಣಕ್ಕಿಳಿಸಬೇಕು ಎಂಬುದನ್ನು ಪಕ್ಷವೇ ತೀರ್ಮಾನಿಸುತ್ತದೆ. ಎಲ್ಲವೂ ದೆಹಲಿ ನಿರ್ದೇಶನದಂತೆ ನಡೆಯುವುದರಿಂದ ರಾಜ್ಯ ಘಟಕದ ಪಾತ್ರ ಏನೂ ಇಲ್ಲ ಎಂಬುದನ್ನು ಈಗಾಗಲೇ ಮನವರಿಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗೆಲುವಿನ ಮಾನದಂಡ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು ಯಾವುದೇ ರೀತಿಯಾದ ಭಿನ್ನಮತಕ್ಕೆ ಅವಕಾಶ ನೀಡಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆಬಾಗಬೇಕಾಗುತ್ತದೆ ಎಂದು ಹೇಳಿದರು.

ರಾಜಧಾನಿ ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ಹಾಲಿ ಇಬ್ಬರು ಶಾಸಕರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದ್ದರೆ, ಶಿವಮೊಗ್ಗ ನಗರದಿಂದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಘಟಾನುಘಟಿಗಳಿಗೆ ಟಿಕೆಟ್ ಕೈತಪ್ಪಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಕಣಕ್ಕಿಳಿದರೆ ಲೋಕಾಯುಕ್ತ ದಾಳಿಗೆ ಸಿಕ್ಕು ಜೈಲು ಪಾಲಾಗಿರುವ ಮಾಡಾಳು ವಿರೂಪಾಕ್ಷಪ್ಪ, ವಯಸ್ಸಿನ ಕಾರಣದಿಂದ ಎಸ್.ಎ.ರವೀಂದ್ರನಾಥ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್.ಅಂಗಾರ ಮತ್ತಿತರರಿಗೆ ಟಿಕೆಟ್ ಖಾತರಿಯಾಗಿಲ್ಲ.

ಕಾರ್ಯಕರ್ತರ ವಿರೋಧ ಹಾಗೂ ಕ್ಷೇತ್ರ ಕಡೆಗಣಿಸಿರುವ ಆರೋಪಕ್ಕೆ ಸಿಲುಕಿರುವ ಎಂ.ಪಿ.ಕುಮಾರಸ್ವಾಮಿ, ಬಸವರಾಜ್ ದಡೇಸೂರು, ಪ್ರೊ.ಲಿಂಗಣ್ಣ, ನೆಹರು ಓಲೇಕಾರ್ ಸೇರಿದಂತೆ ಮತ್ತಿರರಿಗೆ ಟಿಕೆಟ್ ಅರ್ಧಚಂದ್ರ ಎನ್ನಲಾಗುತ್ತಿದೆ.

ಶಿಫಾರಸ್ಸುಗೊಂಡ ಅಭ್ಯರ್ಥಿಗಳ ಹೆಸರು

1. ನಿಪ್ಪಾಣಿ – ಶಶಿಕಲಾ ಜೊಲ್ಲೆ

2. ಚಿಕ್ಕೋಡಿ ಸದಲಗಾ – ಮಹಂತೇಶ್ ಕವಟಗಿಮಠ

3. ಅಥಣಿ – ಮಹೇಶ್ ಕುಮಟಳ್ಳಿ/ ಲಕ್ಣ್ಮಣ್ ಸವದಿ

4. ಕಾಗವಾಡ – ಶ್ರೀಮಂತ ಪಾಟೀಲ್

5. ಕುಡಚಿ – ಪಿ. ರಾಜೀವ್

6. ರಾಯಭಾಗ -ದುರ್ಯೋಧನ ಐಹೊಳೆ

7. ಹುಕ್ಕೇರಿ – ರಮೇಶ್ ಕತ್ತಿ/ನಿಖಿಲ್ ಕತ್ತಿ

8. ಅರಭಾವಿ – ಬಾಲಚಂದ್ರ ಜಾರಕಿಹೊಳಿ

9. ಗೋಕಾಕ್ – ರಮೇಶ್ ಜಾರಕಿಹೊಳಿ

10. ಬೆಳಗಾವಿ ಉತ್ತರ – ಅನಿಲ್ ಬೆನಕೆ

11. ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್

12. ಬೆಳಗಾವಿ ಗ್ರಾಮೀಣ – ಸಂಜಯ್ ಪಾಟೀಲ್/ ಮನೋಳ್ಕರ್

13. ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್

14. ಬೈಲಹೊಂಗಲ – ವಿಶ್ವನಾಥ್ ಪಾಟೀಲ್

15. ಸವದತ್ತಿ – ಆನಂದ್ ಮಾಮನಿ ಪತ್ನಿ

16. ರಾಮದುರ್ಗ – ಮಹದೇವಪ್ಪ ಯಾದವಾಡ್

17. ಮುಧೋಳ – ಗೋವಿಂದ ಕಾರಜೋಳ

18. ತೇರದಾಳ – ಸಿದ್ದು ಸವದಿ

19. ಜಮಖಂಡಿ – ಶ್ರೀಕಾಂತ್ ಕುಲಕರ್ಣಿ

20. ಬೀಳಗಿ – ಮುರುಗೇಶ್ ನಿರಾಣಿ

21. ಬಾಗಲಕೋಟೆ – ವೀರಣ್ಣ ಚರಂತಿಮಠ್

22. ಹುನಗುಂದ – ದೊಡ್ಡನಗೌಡ ಪಾಟೀಲ್

23. ಮುದ್ದೇಬಿಹಾಳ – ಎ.ಎಸ್. ಪಾಟೀಲ್ ನಡಹಳ್ಳಿ

24. ದೇವರ ಹಿಪ್ಪರಗಿ – ಸೋಮನಗೌಡ ಬಿ. ಪಾಟೀಲ್

25. ಬಿಜಾಪುರ ನಗರ – ಬಸನಗೌಡ ಪಾಟೀಲ್ ಯತ್ನಾಳ್

26. ಸಿಂಧಗಿ – ರಮೇಶ್ ಬೂಸನೂರು

27. ಅಫಜಲ್ಪುರ – ಮಾಲೀಕಯ್ಯ ಗುತ್ತೇದಾರ್

28. ಜೇವರ್ಗಿ – ದೊಡ್ಡನಗೌಡ ಪಾಟೀಲ್

29. ಸುರಪುರ – ರಾಜುಗೌಡ

30. ಶಹಾಪುರ – ಶಿರುವಾಳ್

31. ಯಾದಗಿರಿ – ವೆಂಕಟ್ ಮುದ್ನಾಳ್

32. ಗುರುಮಿಠಕಲ್ – ಗಿರೀಶ್ ಮಟ್ಟಣ್ಣನವರ್/ಯೋಗೀಶ್ ಬೆಸ್ತರ್

33. ಚಿತ್ತಾಪುರ – ವಾಲ್ಮೀಕಿ ನಾಯಕ್

34. ಸೇಡಂ – ರಾಜಕುಮಾರ್ ಪಾಟೀಲ್ ತೆಲ್ಕೂರ್

35. ಚಿಂಚೋಳಿ – ಡಾ.ಅವಿನಾಶ್ ಜಾದವ್

36. ಕಲಬುರಗಿ ಗ್ರಾಮಾಂತರ – ಬಸವರಾಜ್ ಮುತ್ತಿಮೂಡ್

37. ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರ್

38. ಆಳಂದ – ಸುಭಾಷ್ ಗುತ್ತೇದಾರ್

39. ಬಸವಕಲ್ಯಾಣ – ಶರಣು ಸಲಗಾರ

40. ಬೀದರ್ – ಸೂರ್ಯಕಾಂತ ನಾಗಮಾರಪಲ್ಲಿ

41. ಔರಾದ್ – ಪ್ರಭು ಚವಾಣ್

42. ರಾಯಚೂರು ಗ್ರಾಮೀಣ – ಶಿವರಾಜ್ ಹವಾಲ್ದಾರ್

43. ರಾಯಚೂರು – ಡಾ. ಶಿವರಾಜ್ ಪಾಟೀಲ್

44. ಮಾನ್ವಿ – ವಜ್ಜಪ್ಪ ಮಾನಲ್

45. ದೇವದುರ್ಗ – ಶಿವನಗೌಡ ನಾಯಕ್

46. ಮಸ್ಕಿ – ಪ್ರತಾಪ್ ಗೌಡ ಪಾಟೀಲ್

47. ಕನಕಗಿರಿ – ಬಸವರಾಜ್ ದಡೇಸೂರು

48. ಗಂಗಾವತಿ – ಪರಣ್ಣ ಮುನುವಳ್ಳಿ

49. ಯಲಬುರ್ಗಾ – ಹಾಲಪ್ಪ ಬಸಪ್ಪ ಆಚಾರ್

50. ಕೊಪ್ಪಳ – ಅಂಬರೀಶ್ ಕರಡಿ/ ವಿರೂಪಾಕ್ಷಪ್ಪ

51. ಗದಗ – ಅನಿಲ್ ಮೆಣಸಿನಕಾಯಿ

52. ರೋಣ – ಕಳಕಪ್ಪ ಬಂಡಿ

53. ನರಗುಂದ – ಸಿಸಿ ಪಾಟೀಲ್

54. ನವಲಗುಂದ – ಶಂಕರ ಪಾಟೀಲ್

55. ಕುಂದಗೋಳ – ಚಿಕ್ಕನಗೌಡರ್/ಎಂ.ಆರ್.ಪಾಟೀಲ್

56. ಧಾರವಾಡ – ಅಮೃತ್ ದೇಸಾಯಿ

57. ಹುಬ್ಬಳ್ಳಿ ಧಾರವಾಡ ಪೂರ್ವ –

58. ಹುಬ್ಬಳ್ಳಿ ಧಾರವಾಡ ಕೇಂದ್ರ – ಜಗದೀಶ್ ಶೆಟ್ಟರ್

59. ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ ಬೆಲ್ಲದ್

60. ಕಲಘಟಗಿ – ಸಿ.ಎಂ. ನಿಂಬಣ್ಣನವರ್

61. ಹಳಿಯಾಳ – ಸುನಿಲ್ ನಾಯ್ಕ

62. ಕಾರವಾರ – ರೂಪಾಲಿ ನಾಯಕ್

63. ಕುಮಟಾ – ದಿನಕರ್ ಶೆಟ್ಟಿ

64.  ಭಟ್ಕಳ್ – ಸುನಿಲ್ ಬಿ. ನಾಯಕ್

65. ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ

66. ಯಲ್ಲಾಪುರ – ಅರೆಬೈಲ್ ಶಿವರಾಮ್ ಹೆಬ್ಬಾರ್

67. ಶಿಗ್ಗಾಂವ್ – ಬಸವರಾಜ್ ಬೊಮ್ಮಾಯಿ

68. ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ

69. ಹಿರೇಕೆರೂರು – ಬಿ.ಸಿ. ಪಾಟೀಲ್

70. ರಾಣೆಬೆನ್ನೂರು – ಅರುಣ್ ಪೂಜಾರ್

71. ಹೂವಿನಹಡಗಲಿ – ಚಂದ್ರ ನಾಯ್ಕ

72. ಹಗರಿಬೊಮ್ಮನಹಳ್ಳಿ – ನೇಮಿರಾಜ್ ನಾಯ್ಕ/ ಲಕ್ಷೀನಾರಾಯಣ

73.  ವಿಜಯನಗರ(ಹೊಸಪೇಟೆ) – ಆನಂದ್ ಸಿಂಗ್

74. ಕಂಪ್ಲಿ – ಸುರೇಶ್ ಬಾಬು

75.  ಸಿರಗುಪ್ಪ – ಸೋಮಲಿಂಗಪ್ಪ

76. ಬಳ್ಳಾರಿ – ಗ್ರಾಮೀಣ – ಬಿ.ಶ್ರೀರಾಮುಲು

77. ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ

78. ಕೂಡ್ಲಿಗಿ – ಲೋಕೇಶ್ ನಾಯಕ್

79. ಮೊಳಕಾಲ್ಮೂರು – ತಿಪ್ಪೇಸ್ವಾಮಿ

80. ಚಳ್ಳಕೆರೆ- ಅನಿಲ್‍ಕುಮಾರ್/ಶಶಿಕುಮಾರ್

81.  ಚಿತ್ರದುರ್ಗ ನಗರ – ತಿಪ್ಪಾರೆಡ್ಡಿ/ಅನೀಶ್ ಸಿದ್ದೇಶ್ವರ್

82. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್

83.  ಹೊಸದುರ್ಗ – ಗೂಳಿಹಟ್ಟಿ ಶೇಖರ್/ಲಿಂಗಮೂರ್ತಿ

84. ಹೊಳಲ್ಕೆರೆ – ಎಂ. ಚಂದ್ರಪ್ಪ

85. ಜಗಳೂರು – ಎಸ್.ವಿ. ರಾಮಚಂದ್ರ

86.  ಹರಪನಹಳ್ಳಿ – ಕರುಣಾಕರ ರೆಡ್ಡಿ

87.  ಹರಿಹರ – ಬಿ.ಪಿ.ಹರೀಶ್

88. ದಾವಣಗೆರೆ ಉತ್ತರ –

89. ದಾವಣಗೆರೆ ದಕ್ಷಿಣ – ಯಶವಂತರಾವ್ ಜಾಧವ್ 

90. ಚನ್ನಗಿರಿ – ಮಾಡಾಳ್ ಮಲ್ಲಿಕಾರ್ಜುನ/ಶಿವಕುಮಾರ್

91. ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ

92. ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯ್ಕ

93. ಭದ್ರಾವತಿ – ಕಾಂತೇಶ್/ಪವಿತ್ರಾ ರಾಮಯ್ಯ

94. ಶಿವಮೊಗ್ಗ – ಕೆ.ಎಸ್.ಈಶ್ವರಪ್ಪ /ಧನಂಜಯ ಸರ್ಜಿ/ಜ್ಯೋತಿ ಪ್ರಕಾಶ್

95. ತೀರ್ಥಹಳ್ಳಿ – ಆರಗ ಜ್ಞಾನೇಂದ್ರ

96. ಶಿಕಾರಿಪುರ – ಬಿ.ವೈ.ವಿಜಯೇಂದ್ರ

97. ಸೊರಬ – ಕುಮಾರ್ ಬಂಗಾರಪ್ಪ

98. ಸಾಗರ – ಹರತಾಳು ಹಾಲಪ್ಪ

99. ಬೈಂದೂರು – ಬಿ. ಸುಕುಮಾರ್ ಶೆಟ್ಟಿ

100. ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ

101. ಉಡುಪಿ – ರಘುಪತಿ ಭಟ್

102. ಕಾಪು – ಲಾಲಾಜಿ ಮೆಂಡನ್

103. ಕಾರ್ಕಳ – ವಿ. ಸುನಿಲ್ ಕುಮಾರ್

104. ಶೃಂಗೇರಿ – ಜೀವರಾಜ್

105. ಚಿಕ್ಕಮಗಳೂರು – ಸಿ.ಟಿ. ರವಿ

106. ತರೀಕೆರೆ – ಡಿ.ಎಸ್. ಸುರೇಶ್

107. ಕಡೂರು – ಬೆಳ್ಳಿಪ್ರಕಾಶ್

108. ಚಿಕ್ಕನಾಯಕನಹಳ್ಳಿ – ಜೆ.ಸಿ. ಮಧುಸ್ವಾಮಿ

109. ತಿಪಟೂರು – ಬಿ.ಸಿ. ನಾಗೇಶ್

110. ತುರುವೇಕೆರೆ – ಮಸಾಲ ಜಯರಾಂ

111. ಕುಣಿಗಲ್ – ಮುದ್ದಹನುಮೇಗೌಡ/ ಕೃಷ್ಣಕುಮಾರ್

112. ತುಮಕೂರು – ಜ್ಯೋತಿ ಗಣೇಶ್

113. ತುಮಕೂರು ಗ್ರಾಮಾಂತರ – ಸುರೇಶ್ ಗೌಡ

114. ಕೊರಟಗೆರೆ – ಅನಿಲ್ ಕುಮಾರ್

115. ಗುಬ್ಬಿ – ಬೆಟ್ಟಸ್ವಾಮಿ ಗೌಡ

116. ಶಿರಾ – ಡಾ. ರಾಜೇಶ್ ಗೌಡ

117. ಚಿಕ್ಕಬಳ್ಳಾಪುರ – ಡಾ. ಸುಧಾಕರ್

118. ಶಿಡ್ಲಘಟ್ಟ – ಸೀಕಲ್ ರಾಮಚಂದ್ರೇಗೌಡ

119. ಕೆಜಿಎಫ್ -ಅಶ್ವಿನಿ ಸಂಪಂಗಿ/ಮುನಿಸ್ವಾಮಿ

120.  ಕೋಲಾರ – ವರ್ತೂರು ಪ್ರಕಾಶ್

121. ಮಾಲೂರು – ಮಂಜುನಾಥ ಗೌಡ/ ಹೂಡಿ ವಿಜಯಕುಮಾರ್

121. ಯಲಹಂಕ – ಎಸ್.ಆರ್. ವಿಶ್ವನಾಥ್

123. ಕೆ.ಆರ್.ಪುರಂ – ಭೈರತಿ ಬಸವರಾಜ್

152. ಬ್ಯಾಟರಾಯನಪುರ – ರವಿ/ ತಮ್ಮಶ್ ಗೌಡ/ ಮುನೀಂದ್ರ ಕುಮಾರ್

125. ಯಶವಂತಪುರ – ಎಸ್.ಟಿ. ಸೋಮಶೇಖರ್

126. ರಾಜರಾಜೇಶ್ವರಿ ನಗರ – ಮುನಿರತ್ನ

127. ದಾಸರಹಳ್ಳಿ – ಮುನಿರಾಜು/ಲೋಕೇಶ್

128. ಮಹಾಲಕ್ಷ್ಮೀ ಲೇಔಟ್ – ಕೆ. ಗೋಪಾಲಯ್ಯ

129. ಮಲ್ಲೇಶ್ವರಂ – ಡಾ. ಸಿ.ಎನ್.ಅಶ್ವಥ ನಾರಾಯಣ

130. ಹೆಬ್ಬಾಳ – ಕಟ್ಟಾಸುಬ್ರಹ್ಮಣ್ಯ ನಾಯ್ಡು/

131. ಸಿ.ವಿ. ರಾಮನ್ ನಗರ – ಎಸ್.ರಘು

132. ಗಾಂಧಿನಗರ – ಸಪ್ತಗಿರಿಗೌಡ/ ಕೃಷ್ಣಯ್ಯ ಶೆಟ್ಟಿ

133. ರಾಜಾಜಿನಗರ – ಸುರೇಶ್ ಕುಮಾರ್

144. ಗೋವಿಂದರಾಜನಗರ – ವಿ. ಸೋಮಣ್ಣ

145. ವಿಜಯನಗರ – ರವೀಂದ್ರ/ ಉಮೇಶ್ ಶೆಟ್ಟಿ

168. ಚಾಮರಾಜಪೇಟೆ – ಭಾಸ್ಕರ್ ರಾವ್/ಸುನೀಲ್ ವೆಂಕಟೇಶ್

146. ಚಿಕ್ಕಪೇಟೆ – ಉದಯ್ ಗರುಡಾಚಾರ್/ಡಾ.ಹೇಮಚಂದ್ರ ಸಾಗರ್/ಜಾಕ್ ಮಂಜು

147. ಬಸವನಗುಡಿ – ರವಿಸುಬ್ರಮಣ್ಯ / ತೇಜಸ್ವಿನಿ ಅನಂತಕುಮಾರ್

148. ಪದ್ಮನಾಭನಗರ – ಆರ್. ಅಶೋಕ್

150. ಬಿಟಿಎಂ ಲೇಔಟ್ – ಅನಿಲ್ ಶೆಟ್ಟಿ

152. ಜಯನಗರ – ಸಿ.ಕೆ.ರಾಮಮೂರ್ತಿ/ ಎನ್.ಆರ್. ರಮೇಶ್/ಎಸ್.ಕೆ.ನಟರಾಜ್

153. ಮಹದೇವಪುರ – ಅರವಿಂದ ಲಿಂಬಾವಳಿ

154. ಬೊಮ್ಮನಹಳ್ಳಿ – ಸತೀಶ್ ರೆಡ್ಡಿ

155. ಬೆಂಗಳೂರು ದಕ್ಷಿಣ – ಎಂ. ಕೃಷ್ಣಪ್ಪ

156. ಹೊಸಕೋಟೆ – ಎಂಟಿಬಿ ನಾಗರಾಜ್/ ನಿತೀಶ್ ಪುರುಷೋತ್ತಮ್

157. ದೇವನಹಳ್ಳಿ – ಪಿಳ್ಳೆ ಮುನಿಶಾಮಪ್ಪ

158. ನೆಲಮಂಗಲ – ನಾಗರಾಜ್

159. ಮಾಗಡಿ – ಪ್ರಸಾದ್ ಗೌಡ/ಎಚ್.ಎಂ.ಕೃಷ್ಣಮೂರ್ತಿ

160. ಕನಕಪುರ – ಡಾ.ಅಪ್ಪಾಜಿ ಗೌಡ

161. ಚನ್ನಪಟ್ಟಣ -ಸಿ.ಪಿ.ಯೋಗೀಶ್ವರ್

Leave a Reply