‘ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತಂತೆ’ ಎಂಬ ಗಾದೆಯಿದೆ. ದೇಶದಲ್ಲಿ ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣದ ಪರಮಾವಧಿಗೆ ಈ ಗಾದೆ ಸರಿಹೊಂದುತ್ತದೆ.
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
- ಸರ್ವಜನಾಂಗದ ಶಾಂತಿಯ ತೋಟವೇ ನಮ್ಮ ಗುರಿ: ಸಿದ್ದರಾಮಯ್ಯ
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
ಹಣದ ವ್ಯವಹಾರವೇ ಇಲ್ಲದ ಮುಡಾ ಹಗರಣಕ್ಕೂ ಇ.ಡಿ ಗೂ ಯಾವ ಸಂಬಂಧ? ಇ.ಡಿ ಇರುವುದು ಅಕ್ರಮ ಹಣದ ವ್ಯವಹಾರಗಳ ಮೇಲೆ ತನಿಖೆ ನಡೆಸಲು. ಮುಡಾ ಹಗರಣದಲ್ಲಿ ಹಣದ ವಹಿವಾಟೇ ನಡೆದಿಲ್ಲ. ಅಂತಹುದರಲ್ಲಿ #ED ಇಲ್ಲಿ ಮೂಗು ತೂರಿಸುತ್ತಿರುವುದೇಕೆ?
ಇ.ಡಿಯನ್ನು ಬಳಸಿಕೊಂಡು ಶತಾಯಗತಾಯ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲೇಬೇಕೆಂದು ಬಿಜೆಪಿ & ಜೆಡಿಎಸ್ ಪಕ್ಷಗಳು ಪಣ ತೊಟ್ಟಿರುವುದು ಸ್ಪಷ್ಟ. ಜನಪ್ರಿಯರಾಗಿರುವ ‘ಅಹಿಂದ’ ನಾಯಕನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವಿದು.
ರಾಜಕೀಯ ದ್ವೇಷ ಎಲ್ಲೆ ಮೀರಬಾರದು. ಸಿದ್ದರಾಮಯ್ಯರಿಗೆ ವಿನಾಕಾರಣ ಕಿರುಕುಳ ನೀಡಿದರೆ ಅದರ ಪರಿಣಾಮ ಯಾರೂ ಊಹಿಸುವುದೂ ಅಸಾಧ್ಯ. Siddaramaiah ನವರು ಹಿಂದಿರುವ ಸಮುದಾಯಗಳ ಶಕ್ತಿಯ ಅರಿವು ಬಹುಶಃ H D Kumaraswamyಯವರ ತಾಳಕ್ಕೆ ಕುಣಿಯುತ್ತಿರುವ ಬಿಜೆಪಿಯ ಹೈಕಮಾಂಡಿಗೆ ಇಲ್ಲ ಎಂದು ತೋರುತ್ತದೆ.
– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ




