ಬನ್ನೇರುಘಟ್ಟ ರಸ್ತೆ ಜಲಾವೃತ: ಮೋರಿಗೆ ಕೈಹಾಕಿ ಕಸ ತೆಗೆದು ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಎ.ಎಸ್.ಐ

2 years ago

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಇಂದು ಮಧ್ಯಾಹ್ನದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಇಡೀ ಪ್ರದೇಶ ಸಂಪೂರ್ಣ ಜಲಾವೃತಗೊಂಡಿತು. ಇದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಆಂಬುಲೆನ್ಸ್ ಗಳು ಕೂಡ ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.

ಕೂಡಲೇ ಸ್ಥಳಕ್ಕೆ ಬಂದ ಮೈಕೋ ಲೇಔಟ್ ಸಂಚಾರ ಠಾಣೆ ASI ಗೋವಿಂದಪ್ಪ ಕೆ ಖುದ್ದಾಗಿ ಮೋರಿಯಲ್ಲಿ ತುಂಬಿದ್ದ ಕಸವನ್ನು ತೆಗೆಯಲು ಮುಂದಾದರು. ಕೈಗಳಿಂದ ಮೋರಿಯಲ್ಲಿ ತುಂಬಿದ ಕಸವನ್ನು ಎತ್ತಿ ನೀರು ಹೋಗಲು ದಾರಿ ಮಾಡಿದರು.

ಮೋರಿಯಲ್ಲಿ ಬಿದ್ದಿದ್ದ ಬ್ಯಾರಿಕೇಟರ್ ಎತ್ತಿ ರಸ್ತೆ ಮೇಲೆ ಇಟ್ಟು ಯಾವುದೇ ವಾಹನ ಸವಾರರು ಅಪಘಾತಕ್ಕೆ ಸಿಲುದಂತೆ ಸುರಕ್ಷತೆ ಕ್ರಮ ಕೈಗೊಂಡರು. ಈ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾದರು.

Leave a Reply