ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಕಿರುವ ಹುಲಿಗಳು: ಪ್ರಿಯಾಂಕ್ ಖರ್ಗೆ

11 months ago

ಛಲವಾದಿ ನಾರಾಯಣಸ್ವಾಮಿ ಅವರು ಆರೆಸ್ಸೆಸ್ ಚಡ್ಡಿಯನ್ನು ತಲೆಯ ಮೇಲೆ ಹೊತ್ತ ಗಳಿಗೆಯಿಂದಲೇ ಅವರಲ್ಲಿ ಮನುವಾದದ ಬುದ್ಧಿ ಬಂದಿದೆ. ಹೀಗಾಗಿ ಅವರ ಮಾತುಗಳು ಎಲ್ಲೆ ಮೀರುತ್ತಿವೆ.

ಬಾಬಾ ಸಾಹೇಬರ ಚುನಾವಣಾ ಸೋಲಿನಲ್ಲಿ ಸಾವರ್ಕರ್ ಪಾತ್ರದ ಕುರಿತು ಅವರು ಸವಾಲು ಹಾಕಿದ್ದರು. ಅದಕ್ಕೆ ನಾನು ದಾಖಲೆಯನ್ನೂ ನೀಡಿದ್ದೆ. ಅವರಲ್ಲಿ ಸ್ವಲ್ಪವಾದರೂ ಗೌರವ ಉಳಿದಿದ್ದರೆ ರಾಜೀನಾಮೆ ಕೊಡಲಿ. ಬಳಿಕ ಯಾವ ಪ್ರಶ್ನೆ ಕೇಳಿದರೂ ಉತ್ತರ ನೀಡುತ್ತೇನೆ.

ಪ್ರಧಾನಿ ಮೋದಿಯವರನ್ನು ಸಮಾಜದ ಪ್ರತಿಯೊಬ್ಬ ಪ್ರಜೆಯೂ ಪ್ರಶ್ನೆ ಮಾಡುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಕಿರುವ ಹುಲಿಗಳು. ಅದನ್ನು ತಿಳಿದುಕೊಳ್ಳಲಿ ಅವರು.

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Leave a Reply