ಕಾರವಾರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮೀನುಗಾರರು ಮತ್ತು ದೊಡ್ಡ ಟ್ರಾಲರ್ಗಳ ನಿರ್ವಾಹಕರಿಗೆ ಕಾರವಾರದ ಕರಾವಳಿ ಭದ್ರತಾ ಪಡೆ ಎಚ್ಚರಿಕೆ ನೀಡಿದ್ದು, ಸಮುದ್ರದಲ್ಲಿ ಯಾವುದೇ ಅನುಮಾನಾಸ್ಪದ ದೋಣಿಗಳ ಚಲನೆಯ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
26 ಮಂದಿ ಭಾರತೀಯರ ಜೀವವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭದ್ರತೆ ಸಂಬಂಧ ಚರ್ಚಿಸಲು ಇತ್ತೀಚೆಗೆ ಕಾರವಾರದಲ್ಲಿ ಸಭೆ ಕರೆಯಲಾಗಿತ್ತು. ಕಾರವಾರ ಭಾರತದ ಅತಿದೊಡ್ಡ ನೌಕಾ ನೆಲೆ ಯಾಗಿದ್ದು ಐಎನ್ ಎಸ್ ಕದಂಬ – ಮತ್ತು ದೇಶದ ಮೊದಲ ವಿಮಾನವಾಹಕ ನೌಕೆ -ಐಎನ್ ಎಸ್ ವಿಕ್ರಮಾದಿತ್ಯ ಇಲ್ಲಿದೆ.
ಕಾರವಾರ ನೌಕಾ ನೆಲೆಯು ಗೋವಾ, ಕೊಚ್ಚಿ ಮತ್ತು ಮುಂಬೈ ನಂತರ ಶಸ್ತ್ರಾಸ್ತ್ರ ವಿಭಾಗ ಮತ್ತು ಕಾರ್ಯತಂತ್ರದ ನೌಕಾ ರಕ್ಷಣಾ ಸ್ಥಳವಾಗಿದೆ. ಈ ನೆಲೆಯನ್ನು ತರಬೇತಿ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ಸಮುದ್ರದಲ್ಲಿ ಯಾವುದೇ ಅನುಮಾನಾಸ್ಪದ ದೋಣಿಗಳು ಕಂಡುಬಂದರೆ, ತಕ್ಷಣ ವರದಿ ಮಾಡಲು ಭದ್ರತಾ ಪಡೆಗಳು ಮೀನುಗಾರರಿಗೆ ಸೂಚಿಸಿದೆ.
ಕಾರವಾರ ಕರಾವಳಿಯಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ದೊಡ್ಡ ದೋಣಿ ನಿರ್ವಾಹಕರಿಗೆ ಮಾಹಿತಿ ನೀಡಲಾಯಿತು. ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿರುವ ನೀರು ಕಾರವಾರ ಕರಾವಳಿಯಿಂದ 250 ಕಿ.ಮೀ ದೂರದಲ್ಲಿದೆ ಮತ್ತು ದೊಡ್ಡ ದೋಣಿಗಳನ್ನು ಅಂತರರಾಷ್ಟ್ರೀಯ ಗಡಿಗಳಿಂದ ದೂರವಿರಲು ತಿಳಿಸಲಾಗಿದೆ ಎಂದು ಕಾರವಾರದ ಮೀನುಗಾರಿಕಾ ಟ್ರಾಲರ್ ನಿರ್ವಾಹಕರು ಹೇಳಿದರು.




