ಕೋಗಿಲು ಪ್ರದೇಶದಲ್ಲಿ ಬಾಂಗ್ಲಾ ನಿವಾಸಿಗಳು ಇಲ್ಲ: ಜಿ.ಪರಮೇಶ್ವರ್

4 months ago

ಬೆಂಗಳೂರು: ಬಿಜೆಪಿ ನಾಯಕರು ಮಾಡುತ್ತಿರುವ ಆರೋಪ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಈ (ಕೋಗಿಲು) ಪ್ರದೇಶದಲ್ಲಿ ಯಾವುದೇ ಬಾಂಗ್ಲಾ ನಿವಾಸಿಗಳು ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶೀಯರು ಅಲ್ಲಿದ್ದಾರೆ ಎಂದು ಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ. ನಾವು ಪರಿಶೀಲಿಸುವುದಿಲ್ಲವೇ? ಸರಿಯಾದ ಪರಿಶೀಲನೆಯ ನಂತರ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಬಾಂಗ್ಲಾದೇಶಿಗಳು ಅಲ್ಲಿದ್ದರೆ, ಅವರಿಗೆ ಮನೆಗಳನ್ನು ನೀಡಲಾಗುತ್ತದೆಯೇ? ಅವರನ್ನು ಬಂಧಿಸಿ ಗಡಿಯಲ್ಲಿ ಬಿಡಲಾಗುತ್ತದೆ. ನಾವು ಅವರ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಗಡೀಪಾರು ಮಾಡುತ್ತೇವೆ ಎಂದರು.

ಇಲ್ಲಿನ ನಿವಾಸಿಗಳು ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಆರ್ ಅಶೋಕ ಹಿಂದೆ ಗೃಹ ಸಚಿವರಾಗಿದ್ದರು. ಅವರಿಗೆ ಇದೆಲ್ಲವೂ ಗೊತ್ತಿದೆ. ಆದರೆ ಅವರು ರಾಜಕೀಯ ಕಾರಣಗಳಿಗಾಗಿ ಮಾತನಾಡುತ್ತಿದ್ದಾರೆ ಎಂದರು.

Leave a Reply